ಸಾಗರ: ತಾಲ್ಲೂಕಿನ ಕಟ್ಟಿನಕಾರು ಗ್ರಾಮದ ಶರಾವತಿ ಅಭಯಾರಣ್ಯ ಪ್ರದೇಶದಲ್ಲಿ ಅರಣ್ಯ ಕಾವಲುಗಾರರ ಮೇಲೆ ಬೇಟೆಗಾರರು ಗುಂಡು ಹಾರಿಸಿ ಪರಾರಿಯಾಗಿರುವ ಪ್ರಕರಣ ಭಾನುವಾರ ತಡರಾತ್ರಿ ನಡೆದಿದೆ.
ಶರಾವತಿ ಕೊಳ್ಳದ ಭಾಗದಲ್ಲಿ ಕಾವಲುಗಾರರು ಗಸ್ತು ತಿರುಗುತ್ತಿದ್ದಾಗ ಕೆಲವರು ಅಲ್ಲಿ ಬೇಟೆ ಆಡುತ್ತಿದ್ದುದು ಗಮನಕ್ಕೆ ಬಂದಿದೆ. ಹಿಡಿಯಲು ಮುಂದಾದ ಕಾವಲುಗಾರರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪ್ರತಿ ಯಾಗಿ ಕಾವಲುಗಾರರೂ ಗುಂಡಿನ ದಾಳಿ ನಡೆಸಿದ್ದಾರೆ.
ಎರಡು ನಾಡ ಬಂದೂಕುಗಳು ಹಾಗೂ ಬೇಟೆಯಾಡಿದ್ದ ಎರಡು ಹಾರು ಬೆಕ್ಕುಗಳನ್ನು ಸ್ಥಳದಲ್ಲೇ ಬಿಟ್ಟು ಬೇಟೆಗಾರರು ಪರಾರಿಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.