ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಕಾವಲುಗಾರರ ಮೇಲೆ ಗುಂಡು

Last Updated 25 ಮೇ 2020, 20:07 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನ ಕಟ್ಟಿನಕಾರು ಗ್ರಾಮದ ಶರಾವತಿ ಅಭಯಾರಣ್ಯ ಪ್ರದೇಶದಲ್ಲಿ ಅರಣ್ಯ ಕಾವಲುಗಾರರ ಮೇಲೆ ಬೇಟೆಗಾರರು ಗುಂಡು ಹಾರಿಸಿ ಪರಾರಿಯಾಗಿರುವ ಪ್ರಕರಣ ಭಾನುವಾರ ತಡರಾತ್ರಿ ನಡೆದಿದೆ.

ಶರಾವತಿ ಕೊಳ್ಳದ ಭಾಗದಲ್ಲಿ ಕಾವಲುಗಾರರು ಗಸ್ತು ತಿರುಗುತ್ತಿದ್ದಾಗ ಕೆಲವರು ಅಲ್ಲಿ ಬೇಟೆ ಆಡುತ್ತಿದ್ದುದು ಗಮನಕ್ಕೆ ಬಂದಿದೆ. ಹಿಡಿಯಲು ಮುಂದಾದ ಕಾವಲುಗಾರರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪ್ರತಿ
ಯಾಗಿ ಕಾವಲುಗಾರರೂ ಗುಂಡಿನ ದಾಳಿ ನಡೆಸಿದ್ದಾರೆ.

ಎರಡು ನಾಡ ಬಂದೂಕುಗಳು ಹಾಗೂ ಬೇಟೆಯಾಡಿದ್ದ ಎರಡು ಹಾರು ಬೆಕ್ಕುಗಳನ್ನು ಸ್ಥಳದಲ್ಲೇ ಬಿಟ್ಟು ಬೇಟೆಗಾರರು ಪರಾರಿಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT