<p><strong>ತೀರ್ಥಹಳ್ಳಿ</strong>: ‘ಕೌಶಲಗಳು ಇಲ್ಲದೆ ಒಳನಾಡು ಮೀನುಗಾರಿಕೆ ನಿರ್ವಹಣೆ ಕಷ್ಟ. ಪ್ರತಿಯೊಂದು ವಿಷಯದಲ್ಲೂ ಪರಿಣತರ ಸಲಹೆ, ಸಹಕಾರ ಅಗತ್ಯ’ ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ರಾಜಣ್ಣ ಸಿ. ಹೇಳಿದರು.</p>.<p>ತಾಲ್ಲೂಕಿನ ಪುಟ್ಟೋಡ್ಲು ತಿಮ್ಮಪ್ಪ ಪಿ.ಜಿ. ಅವರ ಜಮೀನಿನಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಆಯೋಜಿಸಿದ್ದ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>‘ಮೀನುಗಾರಿಕೆಯಲ್ಲಿ ತಳಿಯ ಆಯ್ಕೆ, ಮೀನಿನ ಆಹಾರ, ಕೀಟ ಮತ್ತು ರೋಗಗಳ ನಿರ್ವಹಣೆ, ಕಟಾವು ಕ್ರಿಯೆ, ಮಾರುಕಟ್ಟೆ ಸೌಲಭ್ಯಗಳ ಅರಿವು ಇರಬೇಕು’ ಎಂದು ತಿಳಿಸಿದರು.</p>.<p>‘ಬಯಲುಸೀಮೆಗಳಲ್ಲಿ ಒಳನಾಡು ಮೀನುಕೃಷಿಗೆ ಪೂರಕ ವಾತಾವರಣ ಇರುತ್ತದೆ. ಮಲೆನಾಡು ಭಾಗದ ಕಡಿದಾದ ಪ್ರದೇಶದಲ್ಲಿ ಮಣ್ಣಿನ ರಸಸಾರ ಕಡಿಮೆ ಇರುವುದರಿಂದ ಬಹಳಷ್ಟು ಶ್ರಮ ಅಗತ್ಯವಿದೆ. ಅಂತಹ ಸವಾಲುಗಳನ್ನು ರೈತ ತಿಮ್ಮಪ್ಪ ಎದುರಿಸುವ ಮೂಲಕ ತರಹೇವಾರಿ ಮೀನುಗಳ ಸಾಕಾಣಿಕೆಯಲ್ಲಿ ಯಶಸ್ವಿಯಾಗಿದ್ದಾರೆ’ ಎಂದರು.</p>.<p>ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಆಸಕ್ತ ರೈತರಿಗೆ ಮೀನುಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ ರೈತ ಪುಟ್ಟೋಡ್ಲು ತಿಮ್ಮಪ್ಪ, ‘ಕೃಷಿಯಲ್ಲಿ ಸಾಧಿಸುವ ಛಲ ಇದ್ದಾಗ ಯಶಸ್ಸು ಸಾಧ್ಯ. ವೈಜ್ಞಾನಿಕ ಮೀನು ಕೃಷಿಯಲ್ಲಿ ದ್ವಿಗುಣ ಲಾಭ ಪಡೆಯಬಹುದು’ ಎಂದು ಹೇಳಿದರು.</p>.<p>ರೈತರ ಬೇಡಿಕೆಗೆ ಅನುಸಾರ ತರಬೇತಿ, ಪ್ರಾತ್ಯಕ್ಷಿಕೆ, ಅಧ್ಯಯನ ಪ್ರವಾಸ, ವಿಜ್ಞಾನಿಗಳ ಜಂಟಿ ಕ್ಷೇತ್ರ ಭೇಟಿ ಕುರಿತು ಆತ್ಮ ಯೋಜನೆಯ ಜಿಲ್ಲಾ ಉಪ ಯೋಜನಾ ನಿರ್ದೇಶಕ ಮಂಜುನಾಥ್ ಆರ್. ಮಾಹಿತಿ ನೀಡಿದರು.</p>.<p>ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ರಾದ ಸೌಜನ್ಯಾ ಎಂ.ಬಿ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಮಿಥುನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೀರ್ಥಹಳ್ಳಿ</strong>: ‘ಕೌಶಲಗಳು ಇಲ್ಲದೆ ಒಳನಾಡು ಮೀನುಗಾರಿಕೆ ನಿರ್ವಹಣೆ ಕಷ್ಟ. ಪ್ರತಿಯೊಂದು ವಿಷಯದಲ್ಲೂ ಪರಿಣತರ ಸಲಹೆ, ಸಹಕಾರ ಅಗತ್ಯ’ ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ರಾಜಣ್ಣ ಸಿ. ಹೇಳಿದರು.</p>.<p>ತಾಲ್ಲೂಕಿನ ಪುಟ್ಟೋಡ್ಲು ತಿಮ್ಮಪ್ಪ ಪಿ.ಜಿ. ಅವರ ಜಮೀನಿನಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಆಯೋಜಿಸಿದ್ದ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>‘ಮೀನುಗಾರಿಕೆಯಲ್ಲಿ ತಳಿಯ ಆಯ್ಕೆ, ಮೀನಿನ ಆಹಾರ, ಕೀಟ ಮತ್ತು ರೋಗಗಳ ನಿರ್ವಹಣೆ, ಕಟಾವು ಕ್ರಿಯೆ, ಮಾರುಕಟ್ಟೆ ಸೌಲಭ್ಯಗಳ ಅರಿವು ಇರಬೇಕು’ ಎಂದು ತಿಳಿಸಿದರು.</p>.<p>‘ಬಯಲುಸೀಮೆಗಳಲ್ಲಿ ಒಳನಾಡು ಮೀನುಕೃಷಿಗೆ ಪೂರಕ ವಾತಾವರಣ ಇರುತ್ತದೆ. ಮಲೆನಾಡು ಭಾಗದ ಕಡಿದಾದ ಪ್ರದೇಶದಲ್ಲಿ ಮಣ್ಣಿನ ರಸಸಾರ ಕಡಿಮೆ ಇರುವುದರಿಂದ ಬಹಳಷ್ಟು ಶ್ರಮ ಅಗತ್ಯವಿದೆ. ಅಂತಹ ಸವಾಲುಗಳನ್ನು ರೈತ ತಿಮ್ಮಪ್ಪ ಎದುರಿಸುವ ಮೂಲಕ ತರಹೇವಾರಿ ಮೀನುಗಳ ಸಾಕಾಣಿಕೆಯಲ್ಲಿ ಯಶಸ್ವಿಯಾಗಿದ್ದಾರೆ’ ಎಂದರು.</p>.<p>ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಆಸಕ್ತ ರೈತರಿಗೆ ಮೀನುಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ ರೈತ ಪುಟ್ಟೋಡ್ಲು ತಿಮ್ಮಪ್ಪ, ‘ಕೃಷಿಯಲ್ಲಿ ಸಾಧಿಸುವ ಛಲ ಇದ್ದಾಗ ಯಶಸ್ಸು ಸಾಧ್ಯ. ವೈಜ್ಞಾನಿಕ ಮೀನು ಕೃಷಿಯಲ್ಲಿ ದ್ವಿಗುಣ ಲಾಭ ಪಡೆಯಬಹುದು’ ಎಂದು ಹೇಳಿದರು.</p>.<p>ರೈತರ ಬೇಡಿಕೆಗೆ ಅನುಸಾರ ತರಬೇತಿ, ಪ್ರಾತ್ಯಕ್ಷಿಕೆ, ಅಧ್ಯಯನ ಪ್ರವಾಸ, ವಿಜ್ಞಾನಿಗಳ ಜಂಟಿ ಕ್ಷೇತ್ರ ಭೇಟಿ ಕುರಿತು ಆತ್ಮ ಯೋಜನೆಯ ಜಿಲ್ಲಾ ಉಪ ಯೋಜನಾ ನಿರ್ದೇಶಕ ಮಂಜುನಾಥ್ ಆರ್. ಮಾಹಿತಿ ನೀಡಿದರು.</p>.<p>ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ರಾದ ಸೌಜನ್ಯಾ ಎಂ.ಬಿ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಮಿಥುನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>