<p><strong>ಸೊರಬ:</strong> ಅಪಾರ ಜನಪದ ಸಂಪತ್ತನ್ನು ಹೊಂದಿರುವ ಸೊರಬ ತಾಲ್ಲೂಕಿನಲ್ಲಿ ಪುನಃ ಕಲೆಯು ಅನಾವರಣಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಜ್ವಲ್ ಚಂದ್ರಗುತ್ತಿ ಹೇಳಿದರು.</p>.<p>ತಾಲ್ಲೂಕಿನ ಗುಂಜನೂರಿನಲ್ಲಿ ಆಯೋಜಿಸಿದ್ದ ಬಯಲಾಟ ಕಾರ್ಯಕ್ರಮದಲ್ಲಿ ಕಜಾಪ ವತಿಯಿಂದ ಹಿರಿಯ ಬಯಲಾಟ ಕಲಾವಿದರಿಗ ಸನ್ಮಾನ ನೀಡಿ ಅವರು ಮಾತನಾಡಿದರು.</p>.<p>ದೂರದರ್ಶನ, ಮೊಬೈಲ್ ಹಾವಳಿಯ ನಡುವೆಯೂ ಸತತ 50 ಪ್ರದರ್ಶನ ನೀಡಿ ಜನಪದ ಕಲೆಯನ್ನು ಜೀವಂತವಿರಿಸಿದ ಗುಂಜನೂರು ಗ್ರಾಮದ ಕಲಾಭಿಮಾನಿಗಳಿಗೆ ಕರ್ನಾಟಕ ಜನಪದ ಪರಿಷತ್ತು ನಮನಗಳನ್ನು ಸಲ್ಲಿಸುತ್ತದೆ. ಜನಪದ ಕಲೆ ಮುಂದಿನ ಪೀಳಿಗೆಗೆ ಪಸರಿಸುವ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.</p>.<p>ಊರಿಂದ ಊರಿಗೆ ಜನಪದ ನಡಿಗೆಯ ಶೀರ್ಷಿಕೆಯಡಿ ಕಜಾಪ ತಾಲ್ಲೂಕು ಘಟಕ ಕಾರ್ಯನಿರ್ವಹಿಸುತ್ತಿದ್ದು, ಜನಪದ ಕಲೆಯ ಉಳಿವಿಗಾಗಿ ಶ್ರಮಿಸುತ್ತಿದೆ ಎಂದು ಕಜಾಪ ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ತಿಳಿಸಿದರು.</p>.<p>ಗುಂಜನೂರಿನ ಶನೇಶ್ವರ ದೇವರ 44ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಶನೇಶ್ವರ ಯುವಕ ಸಂಘದವರು ರಾಜಾ ವಿಕ್ರಮನ ಸತ್ವ ಪರೀಕ್ಷೆ ಎಂಬ ಬಯಲಾಟವನ್ನು ಪ್ರದರ್ಶಿಸಿದರು. </p>.<p>ಹಿರಿಯ ಕಲಾವಿದರಾದ ಭಾಗವತ ಶ್ರಾಮಚಂದ್ರಪ್ಪ ಜಾಣೆ, ಶನಿ ದೇವರ ಪಾತ್ರಧಾರಿ ನಾಗಿ ಬಸಪ್ಪ, ಗುರುಗಳಾದ ಸುಭಾಷ್ ಪಾಟೀಲ್, ಸಾರಥಿಯಾದ ಹನುಮಂತಪ್ಪ ಕೆ, ಶೆಟ್ಟಿ ಪಾತ್ರದಲ್ಲಿ ನಾರಾಯಣಪ್ಪ ಎಚ್, ಅವರನ್ನು ಗೌರವಿಸಲಾಯಿತು.</p>.<p>ಕಜಾಪ ಕೋಶಾಧಿಕಾರಿ ಮೋಹನ ಸುರಭಿ, ಸದಸ್ಯ ರಾಘವೇಂದ್ರ ಅಂದವಳ್ಳಿ, ಶಿವಮೂರ್ತಿ ಎಚ್.ಕೆ, ಗಿರೀಶ, ಗಂಗಾಧರ್, ಯಂಕಪ್ಪ ಮತ್ತು ಗುಂಜನೂರು ಗ್ರಾಮಸ್ಥರು, ಕಲಾವಿದರು ಸೇರಿದಂತೆ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೊರಬ:</strong> ಅಪಾರ ಜನಪದ ಸಂಪತ್ತನ್ನು ಹೊಂದಿರುವ ಸೊರಬ ತಾಲ್ಲೂಕಿನಲ್ಲಿ ಪುನಃ ಕಲೆಯು ಅನಾವರಣಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಜ್ವಲ್ ಚಂದ್ರಗುತ್ತಿ ಹೇಳಿದರು.</p>.<p>ತಾಲ್ಲೂಕಿನ ಗುಂಜನೂರಿನಲ್ಲಿ ಆಯೋಜಿಸಿದ್ದ ಬಯಲಾಟ ಕಾರ್ಯಕ್ರಮದಲ್ಲಿ ಕಜಾಪ ವತಿಯಿಂದ ಹಿರಿಯ ಬಯಲಾಟ ಕಲಾವಿದರಿಗ ಸನ್ಮಾನ ನೀಡಿ ಅವರು ಮಾತನಾಡಿದರು.</p>.<p>ದೂರದರ್ಶನ, ಮೊಬೈಲ್ ಹಾವಳಿಯ ನಡುವೆಯೂ ಸತತ 50 ಪ್ರದರ್ಶನ ನೀಡಿ ಜನಪದ ಕಲೆಯನ್ನು ಜೀವಂತವಿರಿಸಿದ ಗುಂಜನೂರು ಗ್ರಾಮದ ಕಲಾಭಿಮಾನಿಗಳಿಗೆ ಕರ್ನಾಟಕ ಜನಪದ ಪರಿಷತ್ತು ನಮನಗಳನ್ನು ಸಲ್ಲಿಸುತ್ತದೆ. ಜನಪದ ಕಲೆ ಮುಂದಿನ ಪೀಳಿಗೆಗೆ ಪಸರಿಸುವ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.</p>.<p>ಊರಿಂದ ಊರಿಗೆ ಜನಪದ ನಡಿಗೆಯ ಶೀರ್ಷಿಕೆಯಡಿ ಕಜಾಪ ತಾಲ್ಲೂಕು ಘಟಕ ಕಾರ್ಯನಿರ್ವಹಿಸುತ್ತಿದ್ದು, ಜನಪದ ಕಲೆಯ ಉಳಿವಿಗಾಗಿ ಶ್ರಮಿಸುತ್ತಿದೆ ಎಂದು ಕಜಾಪ ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ತಿಳಿಸಿದರು.</p>.<p>ಗುಂಜನೂರಿನ ಶನೇಶ್ವರ ದೇವರ 44ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಶನೇಶ್ವರ ಯುವಕ ಸಂಘದವರು ರಾಜಾ ವಿಕ್ರಮನ ಸತ್ವ ಪರೀಕ್ಷೆ ಎಂಬ ಬಯಲಾಟವನ್ನು ಪ್ರದರ್ಶಿಸಿದರು. </p>.<p>ಹಿರಿಯ ಕಲಾವಿದರಾದ ಭಾಗವತ ಶ್ರಾಮಚಂದ್ರಪ್ಪ ಜಾಣೆ, ಶನಿ ದೇವರ ಪಾತ್ರಧಾರಿ ನಾಗಿ ಬಸಪ್ಪ, ಗುರುಗಳಾದ ಸುಭಾಷ್ ಪಾಟೀಲ್, ಸಾರಥಿಯಾದ ಹನುಮಂತಪ್ಪ ಕೆ, ಶೆಟ್ಟಿ ಪಾತ್ರದಲ್ಲಿ ನಾರಾಯಣಪ್ಪ ಎಚ್, ಅವರನ್ನು ಗೌರವಿಸಲಾಯಿತು.</p>.<p>ಕಜಾಪ ಕೋಶಾಧಿಕಾರಿ ಮೋಹನ ಸುರಭಿ, ಸದಸ್ಯ ರಾಘವೇಂದ್ರ ಅಂದವಳ್ಳಿ, ಶಿವಮೂರ್ತಿ ಎಚ್.ಕೆ, ಗಿರೀಶ, ಗಂಗಾಧರ್, ಯಂಕಪ್ಪ ಮತ್ತು ಗುಂಜನೂರು ಗ್ರಾಮಸ್ಥರು, ಕಲಾವಿದರು ಸೇರಿದಂತೆ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>