ಶಿವಮೊಗ್ಗ: ನಗರದ ಸಿದ್ದಯ್ಯ ರಸ್ತೆ, ಎಂಕೆಕೆ ರಸ್ತೆಗಳಲ್ಲಿ ಕಾರು, ಆಟೊರಿಕ್ಷಾಗಳು, ಬೈಕ್ಗಳಿಗೆ ಕಬ್ಬಿಣದ ರಾಡ್ನಿಂದ ಹೊಡೆದು ಹಾನಿ ಮಾಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಆರ್ ಪುರಂನ ಶಾಹಿಲ್ ಖಾನ್ (21), ಮನ್ಸೂರ್ ಅಹಮದ್ (32), ಸೂಳೆಬೈಲ್ನ ಮಹಮದ್ ಸಲೀಂ (30) ಹಾಗೂ ಭರ್ಮಪ್ಪ ನಗರದ ಅಕ್ವಿ ಖಾನ್ (32) ಬಂಧಿತ ಆರೋಪಿಗಳು.
ಬುಧವಾರ ತಡರಾತ್ರಿ ಮುಸುಕುಧಾರಿಗಳಾಗಿ ಬೀದಿಗಿಳಿದಿದ್ದ ಆರೋಪಿಗಳು ರಸ್ತೆಗಳ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸ ಮಾಡಿದ್ದರು. ಕೆಲವು ಘಟನಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ 6, ಕೋಟೆ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದ್ದವು. ಪ್ರಕರಣ ಬೆಳಕಿಗೆ ಬಂದ ಗುರುವಾರವೇ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಶುಕ್ರವಾರ ಮತ್ತಿಬ್ಬರನ್ನು ಬಂಧಿಸಲಾಗಿದೆ.