ಸಿಡಿ ಹರಕೆ ಪೂರೈಸಲು ಸಿದ್ಧರಾದ ಮಕ್ಕಳನ್ನು ತೊಟ್ಟಿಲಲ್ಲಿ ಕೂರಿಸಿ ಮೂರು ಸುತ್ತು ಪ್ರದಕ್ಷಿಣೆ ಹಾಕಿಸುವ ಮೂಲಕ ತಮ್ಮ ಭಕ್ತಿಯ ಬೇಡಿಕೆ ಈಡೇರಿಸುವಂತೆ ಪೋಷಕರು ದೇವಿಯಲ್ಲಿ ಬೇಡಿಕೊಂಡರು. ಸಿಡಿ ವೇಳೆ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಂ. ಸಂತೋಷ, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಕೃಷ್ಣಮೂರ್ತಿ, ಮೈಲಾರಪ್ಪ, ಮಾರುತಿ ಮೆಡಿಕಲ್ಸ್ ಆನಂದ್ ಇದ್ದರು.