ಸಚಿವರನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದ ಅಶ್ವಿನಿ, ತನಿಖೆ ವಿಷಯ ಮಾತನಾಡಲು ಮುಂದಾದಾಗ, ‘ನಿಮ್ಮ ಇಡೀ ಕುಟುಂಬದ ಜೊತೆ ನಾವು ನಿಂತಿದ್ದೇವೆ. ನಾವೇನು ನಿಮಗೆ ದ್ರೋಹ ಮಾಡುತ್ತಿದ್ದೇವೆ ಎಂಬಂತೆ ವರ್ತಿಸುತ್ತಿದ್ದೀರಲ್ಲ’ ಎಂದು ಸಚಿವ ಜ್ಞಾನೇಂದ್ರ ಹೇಳುತ್ತಾರೆ. ಆಗ ಅಶ್ವಿನಿ ಆಕ್ರೋಶದಿಂದ ವಾಪಸಾಗುತ್ತಾರೆ. ಈ ವಿಡಿಯೊ ವೈರಲ್ ಆಗಿದೆ.