ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೀರಗಾಸೆ, ಕೀಲುಗೊಂಬೆ ಕುಣಿತ, ಕುದುರೆ ಕುಣಿತ, ಡ್ರಮ್ ಸೆಟ್, ಡಿಜೆ ಸೌಂಡ್ ಸೇರಿ ವಿವಿಧ ಕಲಾಮೇಳಗಳೊಂದಿಗೆ ಸಂಚರಿಸಿತು. ಪಟ್ಟಣದ ತಾಲ್ಲೂಕು ಕಚೇರಿ ರಸ್ತೆ, ದೊಡ್ಡಕೇರಿ, ಶಿರಾಳಕೊಪ್ಪ ಸರ್ಕಲ್, ದೊಡ್ಡಪೇಟೆ, ಮಿಡ್ಲ್ ಸ್ಕೂಲ್ ರಸ್ತೆ ಹಾಗೂ ತೇರುಬೀದಿಯಲ್ಲಿ ಮಾರ್ಗದಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಡಿಜೆ ಸೌಂಡ್ಗೆ ಯುವಕರು ಕುಣಿದು ಕುಪ್ಪಳಿಸಿದರು.