<p><strong>ಶಿವಮೊಗ್ಗ</strong>: ದುರ್ಗಿಗುಡಿಯ ದುರ್ಗಮ್ಮ ಹಾಗೂ ಮರಿಯಮ್ಮ ದೇವಿಯರ ರಥೋತ್ಸವದ ಮರು ದಿನವಾದ ಬುಧವಾರ ಶಿವಮೊಗ್ಗ ನಗರ ಬಣ್ಣದ ಓಕುಳಿಯಲ್ಲಿ ಮಿಂದೆದ್ದಿತು. ಮುಂಜಾನೆಯಿಂದ ಮಧ್ಯಾಹ್ನದ ವರೆಗೂ ಹೋಳಿಯ ಸಂಭ್ರಮ ಗರಿಗೆದರಿತು. ಪ್ರಕೃತಿ– ಪುರುಷನ ನಡುವಿನ ಕಾಮನೆಗಳಿಗೆ ಹೋಳಿ ಹುಣ್ಣಿಮೆಯ ಬೆಳಕು ಹೊಳಪು ಮೂಡಿಸಿತು. </p>.<p>ಪರಸ್ಪರ ಬಣ್ಣ ಹಚ್ಚುವ ಮೂಲಕ ಚಿಣ್ಣರು, ಯುವಜನರು ಹೋಳಿ ಹಬ್ಬವನ್ನು ಸಂಭ್ರಮವಾಗಿಸಿಕೊಂಡರು. ಬಣ್ಣದಾಟಕ್ಕೆ ವೇದಿಕೆ ಸಜ್ಜುಗೊಳಿಸಲು ಮಂಗಳವಾರ ರಾತ್ರಿ ಚಂದ್ರಗ್ರಹಣ ಸರಿಯುತ್ತಿದ್ದಂತೆಯೇ ಕಾಮಣ್ಣನ ಸುಡುವ ಕಾರ್ಯ ಜೋರಾಗಿ ನಡೆದಿತ್ತು. ಹಿರಿಯ–ಕಿರಿಯರು ಸೇರಿ ಕಾಮಣ್ಣನ ದಹಿಸಿ ವಸಂತನಾಗಮನಕ್ಕೆ ಮುನ್ನುಡಿ ಬರೆದಿದ್ದರು. </p>.<p>ಶಿವಮೊಗ್ಗದಲ್ಲಿ ಹೋಳಿ ಹಬ್ಬ ಬಹುತೇಕ ಗೋಪಿ ವೃತ್ತವನ್ನೇ ಕೇಂದ್ರಿಕರಿಸಿತ್ತು. ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕ ಯುವತಿಯರು ಡಿ.ಜೆಯೊಂದಿಗೆ ಹೆಜ್ಜೆ ಹಾಕಿ ಬಣ್ಣದ ನೀರು ಎರಚಿ ನೃತ್ಯ ಮಾಡಿದರು. ಜೊತೆಗೆ ನಗರದಾದ್ಯಂತ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. </p>.<p>ಹುಣ್ಣಿಮೆ ದಿನ ದುರ್ಗಿಗುಡಿಯ ದುರ್ಗಮ್ಮನ ಬೀದಿಯಲ್ಲಿನ ದುರ್ಗಮ್ಮ ಮತ್ತು ಮರಿಯಮ್ಮನವರ ರಥೋತ್ಸವ ಇರುವ ಕಾರಣ ಶಿವಮೊಗ್ಗ ನಗರದಲ್ಲಿ ಸಂಪ್ರದಾಯದಂತೆ ಮರು ದಿನ ಇಲ್ಲಿ ಬಣ್ಣದಾಟ ಜೀವ ಪಡೆಯುತ್ತದೆ. ಬೆಳಿಗ್ಗೆಯೇ ದೇವಾಲಯದ ಬಳಿ ಬಂದು ಓಕುಳಿಯನ್ನು ಮೈಮೇಲೆ ಹಾಕಿಸಿಕೊಂಡು ಹೋಳಿ ಆಚರಣೆಗೆ ತೆರಳುತ್ತಾರೆ. ನಂತರ ಗಲ್ಲಿ ಗಲ್ಲಿಗಳಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆಮಾಡಿತು.</p>.<p>ಗಾಂಧಿಬಜಾರ್ನ ಬಸವೇಶ್ವರ ದೇವಸ್ಥಾನದ ಎದುರು ಗಾಂಧಿ ಬಜಾರ್ ಗೆಳೆಯರ ಬಳಗದಿಂದ ಹೋಳಿಹಬ್ಬ ಆಚರಿಸಲಾಯಿತು. ಸೀನಪ್ಪಶೆಟ್ಟಿ ವೃತ್ತ (ಗೋಪಿವೃತ್ತ) ಬಣ್ಣದ ಅಂಗಳವಾಗಿ ಮಾರ್ಪಟ್ಟಿತ್ತು. </p>.<p>ಈ ಬಾರಿಯೂ ಹಿಂದೂ ಕೇಸರಿ ಅಲಂಕಾರ ಸಮಿತಿಯಿಂದ ಅದ್ಧೂರಿಯಾಗಿ ಹೋಳಿ ಆಚರಣೆಗೆ ಅವಕಾಶ ಕಲ್ಪಿಸಲಾಗಿತ್ತು. ನೃತ್ಯ, ಡಿ.ಜೆ ಸಂಗೀತದ ಅಬ್ಬರ, ಪರಸ್ಪರ ನೀರೆರೆಚುವ ಮೂಲಕ ಸಾವಿರಾರು ಯುವಕ-ಯುವತಿಯರು ಖುಷಿಯ ಸಾಗರದಲ್ಲಿ ಕುಣಿದು ಕುಪ್ಪಳಿಸಿದರು. ತಣ್ಣೀರಧಾರೆ ಹರಿಯಲು ವ್ಯವಸ್ಥೆ ಮಾಡಲಾಗಿತ್ತು. </p>.<p>ಹೋಳಿ ಆಚರಣೆ ವೇಳೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗ ಮಾಡಲಾಗಿತ್ತು. ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರನ್ನು ರಕ್ಷಣಾ ವ್ಯವಸ್ಥೆಗೆ ನಿಯೋಜಿಸಲಾಗಿತ್ತು. ಮಹಿಳೆಯರು, ಯುವತಿಯರು, ಕಾಲೇಜು ವಿದ್ಯಾರ್ಥಿನಿಯರು ಬಣ್ಣ ಎರಚುತ್ತಾ, ಕುಣಿದು ಕುಪ್ಪಳಿಸಿದರು. ಕೆಲವರು ಹಾಡುಗಳಿಗೆ ಹಜ್ಜೆ ಹಾಕಿದರು. ಕೆಲವರು ಮಕ್ಕಳನ್ನು ಕರೆತಂದು ಹೋಳಿ ಆಡಿ ಖುಷಿಪಟ್ಟರು. </p>.<p>ಗೋಪಿ ವೃತ್ತದಲ್ಲಿ ಹೋಳಿ ಆಚರಣೆ ಕಾರಣ ನೆಹರೂ ರಸ್ತೆ, ಬಾಲರಾಜ ಅರಸ್ ರಸ್ತೆ, ದುರ್ಗಿಗುಡಿ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದವರು ಈ ರಸ್ತೆಗಳಲ್ಲಿ ತಮ್ಮ ವಾಹನಗಳ ಪಾರ್ಕಿಂಗ್ ಮಾಡಿದ್ದರು. ಹೋಳಿ ಆಚರಣೆ ಕಣ್ತುಂಬಿಕೊಳ್ಳಲು ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. </p>.<p>ಎಂ.ಜಿ.ಪ್ಯಾಲೇಸ್ ಕಟ್ಟಡ, ಶ್ರೀನಿಧಿ ಮಳಿಗೆ ಇರುವ ಕಟ್ಟಡ ಸೇರಿದಂತೆ ಅಕ್ಕಪಕ್ಕದ ಕಟ್ಟಡಗಳ ಬಾಲ್ಕನಿಯಲ್ಲಿ ನಿಂತು ಜನರು ಹೋಳಿ ಆಚರಣೆ ಸಂಭ್ರಮ ವೀಕ್ಷಿಸಿದರು. ಮೈತುಂಬ ಬಣ್ಣ ಹಚ್ಚಿಕೊಂಡವರು ಸೆಲ್ಫಿ, ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. </p>.<p>ಮುಂಜಾನೆಯಿಂದಲೇ ರಸ್ತೆಗಿಳಿದು ಸ್ನೇಹಿತರ ಜೊತೆಗೂಡಿ ಬೈಕ್ನಲ್ಲಿ ಓಡಾಡುತ್ತಾ ಬಣ್ಣ ಎರಚಿ ಹಬ್ಬಕ್ಕೆ ರಂಗು ತಂದರು. ನಗರದ ಮುಖ್ಯ ಬಸ್ ನಿಲ್ದಾಣ, ಗಾಂಧಿ ಬಜಾರ್, ಕೋಟೆ ರಸ್ತೆ, ಹೊಳೆ ಬಸ್ ನಿಲ್ದಾಣ, ವಿದ್ಯಾನಗರ ಸೇರಿ ಪೊಲೀಸ್ ಚೌಕಿಯಲ್ಲಿ ಹೋಳಿ ಸಂಭ್ರಮ ಜೋರಾಗಿತ್ತು.</p>.<p>ಎಲ್ಲರೂ ಸೇರಿ ಬಣ್ಣಗಳ ಎರಚುವುದು ಸಹಿಷ್ಣುತೆಯ ಸಂಕೇತ. ಬೇಧ ಮರೆತು ಶುದ್ಧ ಮನಸ್ಸಿನಿಂದ ಹೋಳಿ ಹಬ್ಬ ಆಚರಿಸುವ ಮೂಲಕ ಒಗ್ಗಟ್ಟಿಗೆ ನಾಂದಿ ಹಾಡಿದರು. </p>.<p><strong>ಬಿಜೆಪಿ, ಕಾಂಗ್ರೆಸ್ ಮುಖಂಡರು ಭಾಗಿ</strong></p><p>ಶಿವಮೊಗ್ಗದಲ್ಲಿ ಹೋಳಿ ಹಬ್ಬವನ್ನು ರಾಜಕೀಯ ಮುಖಂಡರು ಸಂಭ್ರಮಿಸಿದರು. ಶಾಸಕ ಎಸ್.ಎನ್.ಚನ್ನಬಸಪ್ಪ ಡಿಸಿಎಂ ಕೆ.ಎಸ್.ಈಶ್ವರಪ್ಪ ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಕೆ.ಈ.ಕಾಂತೇಶ್ ಸೇರಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ನ ಕೆಲ ಮುಖಂಡರು ಹಾಡಿಗೆ ಹೆಜ್ಜೆ ಹಾಕಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ದುರ್ಗಿಗುಡಿಯ ದುರ್ಗಮ್ಮ ಹಾಗೂ ಮರಿಯಮ್ಮ ದೇವಿಯರ ರಥೋತ್ಸವದ ಮರು ದಿನವಾದ ಬುಧವಾರ ಶಿವಮೊಗ್ಗ ನಗರ ಬಣ್ಣದ ಓಕುಳಿಯಲ್ಲಿ ಮಿಂದೆದ್ದಿತು. ಮುಂಜಾನೆಯಿಂದ ಮಧ್ಯಾಹ್ನದ ವರೆಗೂ ಹೋಳಿಯ ಸಂಭ್ರಮ ಗರಿಗೆದರಿತು. ಪ್ರಕೃತಿ– ಪುರುಷನ ನಡುವಿನ ಕಾಮನೆಗಳಿಗೆ ಹೋಳಿ ಹುಣ್ಣಿಮೆಯ ಬೆಳಕು ಹೊಳಪು ಮೂಡಿಸಿತು. </p>.<p>ಪರಸ್ಪರ ಬಣ್ಣ ಹಚ್ಚುವ ಮೂಲಕ ಚಿಣ್ಣರು, ಯುವಜನರು ಹೋಳಿ ಹಬ್ಬವನ್ನು ಸಂಭ್ರಮವಾಗಿಸಿಕೊಂಡರು. ಬಣ್ಣದಾಟಕ್ಕೆ ವೇದಿಕೆ ಸಜ್ಜುಗೊಳಿಸಲು ಮಂಗಳವಾರ ರಾತ್ರಿ ಚಂದ್ರಗ್ರಹಣ ಸರಿಯುತ್ತಿದ್ದಂತೆಯೇ ಕಾಮಣ್ಣನ ಸುಡುವ ಕಾರ್ಯ ಜೋರಾಗಿ ನಡೆದಿತ್ತು. ಹಿರಿಯ–ಕಿರಿಯರು ಸೇರಿ ಕಾಮಣ್ಣನ ದಹಿಸಿ ವಸಂತನಾಗಮನಕ್ಕೆ ಮುನ್ನುಡಿ ಬರೆದಿದ್ದರು. </p>.<p>ಶಿವಮೊಗ್ಗದಲ್ಲಿ ಹೋಳಿ ಹಬ್ಬ ಬಹುತೇಕ ಗೋಪಿ ವೃತ್ತವನ್ನೇ ಕೇಂದ್ರಿಕರಿಸಿತ್ತು. ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕ ಯುವತಿಯರು ಡಿ.ಜೆಯೊಂದಿಗೆ ಹೆಜ್ಜೆ ಹಾಕಿ ಬಣ್ಣದ ನೀರು ಎರಚಿ ನೃತ್ಯ ಮಾಡಿದರು. ಜೊತೆಗೆ ನಗರದಾದ್ಯಂತ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. </p>.<p>ಹುಣ್ಣಿಮೆ ದಿನ ದುರ್ಗಿಗುಡಿಯ ದುರ್ಗಮ್ಮನ ಬೀದಿಯಲ್ಲಿನ ದುರ್ಗಮ್ಮ ಮತ್ತು ಮರಿಯಮ್ಮನವರ ರಥೋತ್ಸವ ಇರುವ ಕಾರಣ ಶಿವಮೊಗ್ಗ ನಗರದಲ್ಲಿ ಸಂಪ್ರದಾಯದಂತೆ ಮರು ದಿನ ಇಲ್ಲಿ ಬಣ್ಣದಾಟ ಜೀವ ಪಡೆಯುತ್ತದೆ. ಬೆಳಿಗ್ಗೆಯೇ ದೇವಾಲಯದ ಬಳಿ ಬಂದು ಓಕುಳಿಯನ್ನು ಮೈಮೇಲೆ ಹಾಕಿಸಿಕೊಂಡು ಹೋಳಿ ಆಚರಣೆಗೆ ತೆರಳುತ್ತಾರೆ. ನಂತರ ಗಲ್ಲಿ ಗಲ್ಲಿಗಳಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆಮಾಡಿತು.</p>.<p>ಗಾಂಧಿಬಜಾರ್ನ ಬಸವೇಶ್ವರ ದೇವಸ್ಥಾನದ ಎದುರು ಗಾಂಧಿ ಬಜಾರ್ ಗೆಳೆಯರ ಬಳಗದಿಂದ ಹೋಳಿಹಬ್ಬ ಆಚರಿಸಲಾಯಿತು. ಸೀನಪ್ಪಶೆಟ್ಟಿ ವೃತ್ತ (ಗೋಪಿವೃತ್ತ) ಬಣ್ಣದ ಅಂಗಳವಾಗಿ ಮಾರ್ಪಟ್ಟಿತ್ತು. </p>.<p>ಈ ಬಾರಿಯೂ ಹಿಂದೂ ಕೇಸರಿ ಅಲಂಕಾರ ಸಮಿತಿಯಿಂದ ಅದ್ಧೂರಿಯಾಗಿ ಹೋಳಿ ಆಚರಣೆಗೆ ಅವಕಾಶ ಕಲ್ಪಿಸಲಾಗಿತ್ತು. ನೃತ್ಯ, ಡಿ.ಜೆ ಸಂಗೀತದ ಅಬ್ಬರ, ಪರಸ್ಪರ ನೀರೆರೆಚುವ ಮೂಲಕ ಸಾವಿರಾರು ಯುವಕ-ಯುವತಿಯರು ಖುಷಿಯ ಸಾಗರದಲ್ಲಿ ಕುಣಿದು ಕುಪ್ಪಳಿಸಿದರು. ತಣ್ಣೀರಧಾರೆ ಹರಿಯಲು ವ್ಯವಸ್ಥೆ ಮಾಡಲಾಗಿತ್ತು. </p>.<p>ಹೋಳಿ ಆಚರಣೆ ವೇಳೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗ ಮಾಡಲಾಗಿತ್ತು. ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರನ್ನು ರಕ್ಷಣಾ ವ್ಯವಸ್ಥೆಗೆ ನಿಯೋಜಿಸಲಾಗಿತ್ತು. ಮಹಿಳೆಯರು, ಯುವತಿಯರು, ಕಾಲೇಜು ವಿದ್ಯಾರ್ಥಿನಿಯರು ಬಣ್ಣ ಎರಚುತ್ತಾ, ಕುಣಿದು ಕುಪ್ಪಳಿಸಿದರು. ಕೆಲವರು ಹಾಡುಗಳಿಗೆ ಹಜ್ಜೆ ಹಾಕಿದರು. ಕೆಲವರು ಮಕ್ಕಳನ್ನು ಕರೆತಂದು ಹೋಳಿ ಆಡಿ ಖುಷಿಪಟ್ಟರು. </p>.<p>ಗೋಪಿ ವೃತ್ತದಲ್ಲಿ ಹೋಳಿ ಆಚರಣೆ ಕಾರಣ ನೆಹರೂ ರಸ್ತೆ, ಬಾಲರಾಜ ಅರಸ್ ರಸ್ತೆ, ದುರ್ಗಿಗುಡಿ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದವರು ಈ ರಸ್ತೆಗಳಲ್ಲಿ ತಮ್ಮ ವಾಹನಗಳ ಪಾರ್ಕಿಂಗ್ ಮಾಡಿದ್ದರು. ಹೋಳಿ ಆಚರಣೆ ಕಣ್ತುಂಬಿಕೊಳ್ಳಲು ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. </p>.<p>ಎಂ.ಜಿ.ಪ್ಯಾಲೇಸ್ ಕಟ್ಟಡ, ಶ್ರೀನಿಧಿ ಮಳಿಗೆ ಇರುವ ಕಟ್ಟಡ ಸೇರಿದಂತೆ ಅಕ್ಕಪಕ್ಕದ ಕಟ್ಟಡಗಳ ಬಾಲ್ಕನಿಯಲ್ಲಿ ನಿಂತು ಜನರು ಹೋಳಿ ಆಚರಣೆ ಸಂಭ್ರಮ ವೀಕ್ಷಿಸಿದರು. ಮೈತುಂಬ ಬಣ್ಣ ಹಚ್ಚಿಕೊಂಡವರು ಸೆಲ್ಫಿ, ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. </p>.<p>ಮುಂಜಾನೆಯಿಂದಲೇ ರಸ್ತೆಗಿಳಿದು ಸ್ನೇಹಿತರ ಜೊತೆಗೂಡಿ ಬೈಕ್ನಲ್ಲಿ ಓಡಾಡುತ್ತಾ ಬಣ್ಣ ಎರಚಿ ಹಬ್ಬಕ್ಕೆ ರಂಗು ತಂದರು. ನಗರದ ಮುಖ್ಯ ಬಸ್ ನಿಲ್ದಾಣ, ಗಾಂಧಿ ಬಜಾರ್, ಕೋಟೆ ರಸ್ತೆ, ಹೊಳೆ ಬಸ್ ನಿಲ್ದಾಣ, ವಿದ್ಯಾನಗರ ಸೇರಿ ಪೊಲೀಸ್ ಚೌಕಿಯಲ್ಲಿ ಹೋಳಿ ಸಂಭ್ರಮ ಜೋರಾಗಿತ್ತು.</p>.<p>ಎಲ್ಲರೂ ಸೇರಿ ಬಣ್ಣಗಳ ಎರಚುವುದು ಸಹಿಷ್ಣುತೆಯ ಸಂಕೇತ. ಬೇಧ ಮರೆತು ಶುದ್ಧ ಮನಸ್ಸಿನಿಂದ ಹೋಳಿ ಹಬ್ಬ ಆಚರಿಸುವ ಮೂಲಕ ಒಗ್ಗಟ್ಟಿಗೆ ನಾಂದಿ ಹಾಡಿದರು. </p>.<p><strong>ಬಿಜೆಪಿ, ಕಾಂಗ್ರೆಸ್ ಮುಖಂಡರು ಭಾಗಿ</strong></p><p>ಶಿವಮೊಗ್ಗದಲ್ಲಿ ಹೋಳಿ ಹಬ್ಬವನ್ನು ರಾಜಕೀಯ ಮುಖಂಡರು ಸಂಭ್ರಮಿಸಿದರು. ಶಾಸಕ ಎಸ್.ಎನ್.ಚನ್ನಬಸಪ್ಪ ಡಿಸಿಎಂ ಕೆ.ಎಸ್.ಈಶ್ವರಪ್ಪ ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಕೆ.ಈ.ಕಾಂತೇಶ್ ಸೇರಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ನ ಕೆಲ ಮುಖಂಡರು ಹಾಡಿಗೆ ಹೆಜ್ಜೆ ಹಾಕಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>