‘ತೀರ್ಥಹಳ್ಳಿ ಕ್ಷೇತ್ರಕ್ಕೆ ಸೀಮಿತವಾಗಿದ್ದ ನನಗೆ ಮುಖ್ಯಮಂತ್ರಿ ಮತ್ತು ಹಿರಿಯ ಮುಖಂಡರು ಉನ್ನತ ಗೃಹಖಾತೆ ನೀಡುವ ಮೂಲಕ ರಾಜ್ಯದ ಸೇವೆ ಮಾಡುವ ಅವಕಾಶ ನೀಡಿದ್ದಾರೆ. ಎಷ್ಟೇ ಟೀಕೆ, ನಿಷ್ಠುರ ಮಾತುಗಳು ಬರಲಿ, ಸವಾಲಾಗಿ ಸ್ವೀಕರಿಸುತ್ತೇನೆ. ಕ್ಷೇತ್ರದ ಘನತೆಗೆ ಕುಂದು ಬಾರದಂತೆ ಕಾರ್ಯನಿರ್ವಹಿಸುತ್ತೇನೆ’ ಎಂದು ಹೇಳಿದರು. ಯುವ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಬಗರ್ಹುಕುಂ ಸಮಿತಿ ಅಧ್ಯಕ್ಷ ಬಂಕ್ರಿಬೀಡು ಮಂಜುನಾಥ್, ವಾಟಗದ್ದೆ ದಿನೇಶ್, ಭಾಸ್ಕರ ಜೋಯ್ಸ್, ವೈ. ಶ್ರೀಧರ್, ಸತೀಶ ಯಡೂರು, ಹೆರಟೆ ಆದರ್ಶ, ಪಿಎಸ್ಐ ನಾಗರಾಜ್ ಇದ್ದರು.