ಜಿಯೊಮತ್ತು ಏರ್ಟೆಲ್ ಕಂಪನಿಗಳಿಗೆ ತಲಾ 69 ಟವರ್ಗಳನ್ನು ನಿರ್ಮಿಸಿಕೊಡುವಂತೆ ಕೋರಲಾಗಿತ್ತು. ಪ್ರಸ್ತುತ ಜಿಯೊ ಸಂಸ್ಥೆ 37 ಮತ್ತು ಏರ್ಟೆಲ್ಸಂಸ್ಥೆ 25ಟವರ್ಗಳನ್ನುನಿರ್ಮಿಸಿದೆ.ಮಲೆನಾಡು ಭಾಗದ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕುಗಳಲ್ಲಿ ವಿವಿಧ ಕಾರಣಗಳಿಂದಾಗಿ ಉಳಿದ ಟವರ್ಗಳ ನಿರ್ಮಾಣದಲ್ಲಿನಸಮಸ್ಯೆಗಳ ಕುರಿತುಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಟವರ್ಗಳಅಗತ್ಯಕ್ಕೆ ವಿದ್ಯುತ್ ಸರಬರಾಜು ಮಾಡಲು ಜಿಲ್ಲೆಯಲ್ಲಿ 110 ಕೆ.ವಿ.ಸಾಮರ್ಥ್ಯದ 112 ವಿದ್ಯುತ್ ಘಟಕಗಳನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದರಿಂದಾಗಿ ಮಲೆನಾಡು ಭಾಗದ ಬಿಎಸ್ಎನ್ಎಲ್ ಟವರ್ಗಳಿಗೆವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಎ.ಆರ್. ರವಿ, ಬಿಎಸ್ಎನ್ಎಲ್ ವಿಭಾಗೀಯ ವ್ಯವಸ್ಥಾಪಕ ಕೃಷ್ಣ ಮೊಗೇರ, ಜಿಯೊಸಂಸ್ಥೆಯ ಮಿಥುನ್, ಏರ್ಟೆಲ್ನ ವ್ಯವಸ್ಥಾಪಕ ನಿರ್ದೇಶಕಪದ್ಮನಾಭ, ಶಾಂತಕುಮಾರ್, ಮ್ಯಾಥ್ಯೂ, ಮೆಸ್ಕಾಂನ ಎಂಜಿನಿಯರ್ ನಟರಾಜ್, ಜ್ಯೋತಿಪ್ರಕಾಶ್ಇದ್ದರು.