ದೇಶದಲ್ಲಿಯೇ ಈಸೂರು ಗ್ರಾಮ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಖ್ಯಾತಿ ಪಡೆದಿದೆ. ಪ್ರಥಮ ಸ್ವಾತಂತ್ರ್ಯ ಗ್ರಾಮ ಎಂದು ಈಸೂರನ್ನು ಕರೆಯಲಾಗುತ್ತದೆ. ಇಂತಹ ಗ್ರಾಮದಲ್ಲಿ ‘ಈಸೂರು ದಂಗೆ’ ಎಂಬ ಹೆಸರಿನಲ್ಲಿರುವ ಹೋರಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿ ಗೆಲುವು ಸಾಧಿಸುವ ಮೂಲಕ ಪ್ರಖ್ಯಾತಿ ಪಡೆದಿತ್ತು. ರಾಜ್ಯ ಹಾಲುಮತ ಮಹಾಸಭಾದ ಉಪಾಧ್ಯಕ್ಷ, ದಂತ ವೈದ್ಯ ಡಾ.ಪ್ರಶಾಂತ್ ಈ ಹೋರಿಯ ಮಾಲೀಕರಾಗಿದ್ದು, ಈಸೂರು ಗ್ರಾಮದ ಮಂಜು ಹೋರಿ ಪೋಷಣೆ ಮಾಡುತ್ತಿದ್ದರು.