ತಾಲ್ಲೂಕಿನ ಕುರುವಳ್ಳಿ ಜಗದೀಶ್ ಮಣ್ಣಿನಲ್ಲಿ ಅಪ್ಪುವಿನ ಮೂರ್ತಿ ಮಾಡಿದ ಕಲಾವಿದ. ಇಲ್ಲಿನ ‘ಶಿಲ್ಪಕಲಾ ಸಂಗಮ’ದಲ್ಲಿ ವಿಗ್ರಹಗಳನ್ನು ಕೆತ್ತುವ ಅವರು, ತಂದೆ ಬಾಲಕೃಷ್ಣ, ತಾಯಿ ರಾಣಿದೇವಿ ಅವರಿಂದ ಬಾಲ್ಯದಿಂದಲೇ ಮೂರ್ತಿಗಳನ್ನು ಮಾಡುವ ಕಲೆಯನ್ನು ಬೆಳೆಸಿಕೊಂಡಿದ್ದರು. ಬಿಡದಿಯಲ್ಲಿ ಇರುವ ಕೆ.ಪಿ.ಜೆ ಪ್ರಭು ಕರಕುಶಲ ಸಂಸ್ಥೆ ಜೋಗರದೊಡ್ಡಿಯಲ್ಲಿ ಶಿಲ್ಪಕಲೆಯ ಬಗ್ಗೆ ತರಬೇತಿ ಪಡೆದಿದ್ದಾರೆ.