ಕಾಗೋಡು ಸತ್ಯಾಗ್ರಹದಲ್ಲಿ ಪಾಲ್ಗೊಂಡು ತೆರೆಮರೆಯಲ್ಲಿ ಕೆಲಸ ಮಾಡಿದ ಹಲವು ಪ್ರಮುಖರನ್ನು ರಾಜಶೇಖರ್ ತಮ್ಮ ಕೃತಿಯಲ್ಲಿ ಗುರುತಿಸಿದ್ದಾರೆ. ಇದರ ಜೊತೆಗೆ ಯಾರನ್ನೂ ವೈಭವೀಕರಣ ಮಾಡದೆ ಒಮ್ಮೆ ಚಳವಳಿ ನಡೆಸಿದವರು ನಿರ್ಣಾಯಕ ಘಟ್ಟದಲ್ಲಿ ಭಿನ್ನ ಹಾದಿ ಹಿಡಿದು ರಾಜಕೀಯ ನೆಲೆ ಕಂಡು ಕೊಳ್ಳ ಲು ಮುಂದಾಗಿದ್ದನ್ನು ಕೂಡ ವಾಸ್ತವ ನೆಲೆಗಟ್ಟಿನಲ್ಲಿ ಕಥನವಾಗಿಸಿದ್ದಾರೆ.