ಹರಿಯುವ ನದಿಯಂತೆ, ಉದಯಿಸುವ ಸೂರ್ಯನಂತೆ, ಬಿಸುವ ಗಾಳಿಯಂತೆ ನಿರಂತರವಾಗಿ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಕೆಲಸ ಆಗಬೇಕು. ಹಿಂದೆ ಸಾಹಿತ್ಯದ ಉಳಿವಿಗೆ ಪ್ರಯತ್ನಿಸಿದ ಫ.ಗು. ಹಳಕಟ್ಟಿ, ಎಂ.ಎಂ. ಕಲಬುರ್ಗಿ ಅವರ ರೀತಿ ಪ್ರಸ್ತುತ ಅಶೋಕ ದೊಮ್ಮಲೂರು ತಾಳೆಗರಿಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಸಾಹಿತ್ಯದ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.