ಶಿವಮೊಗ್ಗ: ಆರಗ ಜ್ಞಾನೇಂದ್ರ ಅವರು ಜಾತಿ-ಧರ್ಮಗಳ ನಡುವೆ ಕೋಮು ಗಲಭೆ ಸೃಷ್ಟಿಸುವ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೋರಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರು ಗುರುವಾರ ಜಯನಗರ ಠಾಣೆಗೆ ದೂರು ನೀಡಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಗಿರೀಶ್, ಮುಖಂಡರಾದ ಬಿ. ಲೋಕೇಶ್, ಎಸ್. ಕುಮರೇಶ್, ಇ.ಟಿ. ನಿತಿನ್, ಎಂ. ರಾಕೇಶ್, ಪವನ್, ದರ್ಶನ್, ಶ್ರೀನಿವಾಸ್, ಗಜ, ವೆಂಕಟೇಶ್ ಇದ್ದರು.
ಆರಗ ವಿರುದ್ಧಭದ್ರಾವತಿ ನಗರ- ಗ್ರಾಮಾಂತರ ಯುವ ಕಾಂಗ್ರೆಸ್ ಕಾರ್ಯಕರ್ತರು ಭದ್ರಾವತಿ ಹಳೆ ನಗರ ಠಾಣೆಗೆ ದೂರು ನೀಡಿದ್ದಾರೆ.
ಭದ್ರಾವತಿ ನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಜಿ. ವಿನೋದ್ ಕುಮಾರ್, ಮುಖಂಡರಾದ ಅಫ್ತಾಬ್ ಅಹಮದ್, ಒಬಿಸಿ ಘಟಕದ ಅಧ್ಯಕ್ಷರಾದ ಗಂಗಾಧರ್, ಸಚಿನ್ ಸಿಂದ್ಯಾ, ಕೇಶವ್, ತಬ್ರೇಜ್, ಅಮೋಸ್ ಇದ್ದರು.