2015ರಲ್ಲಿ ಶಿಕ್ಷಣ ಮಂತ್ರಿಯಾಗಿದ್ದಾಗ ಕಾರ್ಯಕ್ರಮದಲ್ಲಿ ಸಿಕ್ಕ ಪುನಿತ್ಗೆ ಇಲಾಖೆಯ ರಾಯಭಾರಿಯಾಗಿ ಆರ್ಟಿಇ ಪ್ರಚಾರಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದೆವು. ಭೂಮಿ ತೂಕದ ಸದ್ಗುಣಗಳ ಮನುಷ್ಯ ಒಂದು ನಗೆಯ ಜತೆಗೆ ಒಪ್ಪಿಗೆ ಸೂಚಿಸಿದ್ದರು. ಒಂದು ರುಪಾಯಿ ಕೂಡಾ ಸಂಭಾವನೆ ಪಡೆಯಲಿಲ್ಲ. ಶಿಕ್ಷಣ ಇಲಾಖೆ ರೂಪಿಸಿದ ಹಾಡು ಮನೆಮನೆಗೆ ತಲುಪಿಸುವ ಮೂಲಕ ಆರ್ಟಿಇ ಯಶಸ್ವಿ ಅನುಷ್ಠಾನದಲ್ಲಿ ಸಹಕರಿಸಿದ್ದರು. ಅಂದು ಕೃತಜ್ಞತಾಪೂರಕವಾಗಿ ‘ನೀವು ರಾಜಕುಮಾರನ ಮಗನೇ ಸೈ. ಹೆಸರಿಗೆ ಮಾತ್ರವಲ್ಲ, ಗುಣದಲ್ಲೂ ಅಷ್ಟೇ’ ಎಂದಾಗ ‘ಅಪ್ಪಾಜಿಯ ಆಶಿರ್ವಾದ’ ಎಂದು ನಿಷ್ಕಲ್ಮಷ ನಗೆ ಬೀರಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.