ತ್ಯಾಗರ್ತಿ: ಸಾಗರ ತಾಲ್ಲೂಕಿನ ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಾಲೆ ಪರಮೇಶ್ವರ್ ಅವರ ತೋಟದಲ್ಲಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೋಮವಾರ ಕ್ಯಾದಿಗೊಪ್ಪದ ಕೆ.ಬಿ. ಮಂಜುನಾಥ್ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಮಂಜುನಾಥ್ ಹಾವು ಹಿಡಿಯುವುದರಲ್ಲಿ ಪ್ರವೀಣರಾಗಿದ್ದು, ಈಗಾಗಲೇ ಹಲವಾರು ಕಾಳಿಂಗಸರ್ಪವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. ತಾಲ್ಲೂಕಿನಲ್ಲಿ ಕಾಳಿಂಗ ಸರ್ಪ ಕಂಡರೆ ಕೆ.ಬಿ. ಮಂಜುನಾಥ್ ಹಾಗೂ ದೇವರಾಜ್ ಅವರಿಗೆ ಜನರು ಕರೆ ಮಾಡುತ್ತಾರೆ.