ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕ್ಷಸರ ಹತ್ತಿರ ಕೊರೊನಾ ಬರೊಲ್ಲ, ನನಗಂತೂ ಬಂದಿಲ್ಲ: ಈಶ್ವರಪ್ಪ

ಉದ್ಯೋಗ ಖಾತ್ರಿ ಕೆಲಸ 150 ದಿನಗಳಿಗೆ ಹೆಚ್ಚಳ
Last Updated 22 ಮೇ 2020, 10:49 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಕ್ಷಸರ ಹತ್ತಿರ ಕೊರೊನಾ ಬರುವುದಿಲ್ಲ. ನನಗಂತೂ ಬಂದಿಲ್ಲ. ನಿಮಗೆ ಬಂದಿದೆಯೇ ಎಂದು ಈಶ್ವರಪ್ಪ ಪತ್ರಕರ್ತರನ್ನೇ ಪ್ರಶ್ನಿಸಿದರು. ಕೊರೊನಾ ಬರುತ್ತದೆ ಎಂದು ಹೆಣದ ರೀತಿ ಮನೆಯಲ್ಲೇ ಇರಲು ಸಾಧ್ಯವೇ? ಪರಿಸ್ಥಿತಿ ಎದುರಿಸಲು ಆತ್ಮಸ್ಥೈರ್ಯಬೇಕು. ಜತೆಗೆ, ಜಾಗ್ರತೆಯೂ ಇರಬೇಕು ಎಂದುಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಿವಿಮಾತು ಹೇಳಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇದುವರೆಗೂ ನೀಡುತ್ತಿದ್ದ ವಾರ್ಷಿಕ 100 ದಿನಗಳ ಕೆಲಸವನ್ನು 150ಕ್ಕೆಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಮೋದಿಅವರು ನರೇಗಾ ಯೊಜನೆಮತ್ತಷ್ಟು ಬಲಪಡಿಸಲು ಸೂಚಿಸಿದ್ದಾರೆ. ಬಜೆಟ್‌ನಲ್ಲಿ ₹60 ಸಾವಿರ ಕೋಟಿ ಮೀಸಲಿಟ್ಟಿದ್ದರು. ಪ್ರತಿಯೊಬ್ಬರಿಗೂ 50 ದಿನಗಳು ಹೆಚ್ಚುವರಿ ಕೆಲಸ ನೀಡಲು ನಿರ್ಧರಿಸಿರುವ ಕಾರಣ ಮತ್ತೆ ₹40 ಸಾವಿರ ಕೋಟಿ ಹೆಚ್ಚುವರಿ ಅನುದಾನನೀಡುತ್ತಿದ್ದಾರೆ. ಈ ವರ್ಷ ಖಾತ್ರಿ ಕೆಲಸಗಳಿಗೆ ₹1 ಲಕ್ಷ ಕೋಟಿಅನುದಾನದೊರೆಯಲಿದೆ. ಕೂಲಿ ಹಣವನ್ನೂ ₨ 275ಕ್ಕೆ ಹೆಚ್ಚಿಸಲಾಗಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಖಾತ್ರಿ ಕೆಲಸ ಕೇಳಿಕೊಂಡು ಬರುವ ಎಲ್ಲ ಬಡವರಿಗೂ ತಕ್ಷಣ ಕೆಲಸ ನೀಡಲು ಪಿಡಿಒಗಳಿಗೆ ಸೂಚಿಸಲಾಗಿದೆ. ಕೆಲಸ ನೀಡದೇ ಅಲೆದಾಡಿಸಿದರೆ ಅಂಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಪಿಎಸ್‌ಐ ಕ್ರಮಕ್ಕೆ ಪರೋಕ್ಷ ಸಮರ್ಥನೆ:ಸೋನಿಯಾ ಗಾಂಧಿ ಅವರ ವಿರುದ್ಧ ಸಾಗರ ಪಿಎಸ್‌ಐ ಎಫ್‌ಐಆರ್ ದಾಖಲಿಸಿದ ಕ್ರಮವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡ ಸಚಿವ ಈಶ್ವರಪ್ಪ, ದೇಶದ ಸಂಕಷ್ಟದ ಸಮಯದಲ್ಲಿ ಸರ್ಕಾರದ ಹೋರಾಟಕ್ಕೆ ವಿರೋಧ ಪಕ್ಷಗಳು ಸಾಥ್ ನೀಡಬೇಕು. ಸೋನಿಯಾ ಗಾಂಧಿಹಾಗೆ ಮಾಡದೇ ಟೀಕೆ ಮಾಡಿದ್ದಾರೆ. ಅವರಹೇಳಿಕೆ ದೇಶದ ಜನರಿಗೆ ನೋವು ತಂದಿದೆ. ದೂರು ನೀಡಿದ ತಕ್ಷಣ ಪ್ರಕರಣ ದಾಖಲಿಸಬೇಕು ಎಂದೇನಿಲ್ಲ. ಪಿಎಸ್‌ಐ ಅವರ ಕರ್ತವ್ಯ ನಿಭಾಯಿಸಿದ್ದಾರೆ. ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT