ಪಿಎಸ್ಐ ಕ್ರಮಕ್ಕೆ ಪರೋಕ್ಷ ಸಮರ್ಥನೆ:ಸೋನಿಯಾ ಗಾಂಧಿ ಅವರ ವಿರುದ್ಧ ಸಾಗರ ಪಿಎಸ್ಐ ಎಫ್ಐಆರ್ ದಾಖಲಿಸಿದ ಕ್ರಮವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡ ಸಚಿವ ಈಶ್ವರಪ್ಪ, ದೇಶದ ಸಂಕಷ್ಟದ ಸಮಯದಲ್ಲಿ ಸರ್ಕಾರದ ಹೋರಾಟಕ್ಕೆ ವಿರೋಧ ಪಕ್ಷಗಳು ಸಾಥ್ ನೀಡಬೇಕು. ಸೋನಿಯಾ ಗಾಂಧಿಹಾಗೆ ಮಾಡದೇ ಟೀಕೆ ಮಾಡಿದ್ದಾರೆ. ಅವರಹೇಳಿಕೆ ದೇಶದ ಜನರಿಗೆ ನೋವು ತಂದಿದೆ. ದೂರು ನೀಡಿದ ತಕ್ಷಣ ಪ್ರಕರಣ ದಾಖಲಿಸಬೇಕು ಎಂದೇನಿಲ್ಲ. ಪಿಎಸ್ಐ ಅವರ ಕರ್ತವ್ಯ ನಿಭಾಯಿಸಿದ್ದಾರೆ. ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.