ಸಾಗರ: ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಥೆಯು ಜುಲೈ 16ರಂದು ಕೆ.ವಿ. ಸುಬ್ಬಣ್ಣ ಸ್ಮರಣೆ ಕಾರ್ಯಕ್ರಮ ಆಯೋಜಿಸಿದೆ. ಅಂದು ಸಂಜೆ 4ಕ್ಕೆ ನೀನಾಸಂ ಸಭಾಂಗಣದಲ್ಲಿ ರಂಗನಟಿ ಅರುಂಧತಿ ನಾಗ್ ಅವರು ‘ಸಂಸ್ಥೆ ಕಟ್ಟುವ ಕೆಲಸ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸಂಜೆ 7ಕ್ಕೆ ಶಿವರಾಮ ಕಾರಂತ ರಂಗಮಂದಿರದಲ್ಲಿ ‘ಕೋರಿಯೋಲೇನಸ್’ (ರಚನೆ: ಶೇಕ್ ಸ್ಪಿಯರ್, ಅನುವಾದ, ನಿರ್ದೇಶನ: ಅಕ್ಷರ ಕೆ.ವಿ) ನಾಟಕವನ್ನು ನೀನಾಸಂ ತಂಡದವರು ಅಭಿನಯಿಸಲಿದ್ದಾರೆ.