ಅಗಸವಳ್ಳಿ ಶ್ರೀಮಠದ ಕೆರೆ ಜಾಗವನ್ನು ಈರೇಗೌಡ ಕುಟುಂಬ ಒತ್ತುವರಿ ಮಾಡಿದ್ದಾರೆ ಎಂದು ಗ್ರಾಮಸ್ಥರ ದೂರಿನ ಕಾರಣ ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ತಹಶೀಲ್ದಾರ್ ನಾಗರಾಜ್ ನೇತೃತ್ವದ ತಂಡ ಕೆರೆ ಒತ್ತುವರಿ ತೆರವಿಗೆ ಸ್ಥಳಕ್ಕೆ ಧಾವಿಸಿತ್ತು. ಈ ಸಮಯದಲ್ಲಿಈರೇಗೌಡ ಕುಟುಂಬದ ಸದಸ್ಯರು ವಿಷ ಕುಡಿಯಲು ಮುಂದಾದರು. ಕೀಟನಾಶಕ ಕೈಗೆತ್ತಿಕೊಂಡು ಇಡೀ ವಾತಾವರಣ ಗಲಿಬಿಲಿಗೊಳಿಸಿದರು. ತಕ್ಷಣ ಎಚ್ಚೆತ್ತ ಕಂದಾಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು ವಿಷ ಕಸಿದುಕೊಂಡು ಎಸೆದರು.