ಭೂಮಿ ಹುಣ್ಣಿಮೆ ಹಬ್ಬವನ್ನು ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ, ಸಿದ್ದಾಪುರ ಭಾಗದಲ್ಲಿ ಭೂಮಣ್ಣಿ ಹಬ್ಬ ಎಂದೇ ಕರೆಯುತ್ತಾರೆ. ಹಿಂದಿನ ರಾತ್ರಿ ಶುರುವಾದ ಹಬ್ಬ ಮಾರನೆಯ ದಿನ ಪೂಜೆಯೊಂದಿಗೆ ಮುಗಿಯುತ್ತದೆ. ಮಂಗಳವಾರ ರಾತ್ರಿ ಬಗೆ ಬಗೆಯ ಆಹಾರ ಖಾದ್ಯಗಳನ್ನು ಹಾಗೂ ಚರಗ ಸಿದ್ಧಪಡಿಸಿ, ಬುಧವಾರ ನಸುಕಿನ ಜಾವ ಭೂಮಿ ಹುಣ್ಣಿಮೆ ಬುಟ್ಟಿಯಲ್ಲಿ ಚರಗ ತೆಗೆದುಕೊಂಡು ಹೋಗಿ ಹೊಲಗಳಿಗೆ ಚೆಲ್ಲಲಾಯಿತು.