‘ಬೋನಿಗೆ ಬಿದ್ದಿರುವ ಚಿರತೆಯನ್ನು ಸದ್ಯ ತ್ಯಾವರೆಕೊಪ್ಪದ ಹುಲಿ–ಸಿಂಹಧಾಮದಲ್ಲಿ ಇಡಲಾಗಿದೆ. ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿ ನಂತರ ಕಾಡಿಗೆ ಬಿಡಲಾಗುವುದು. ಅದಕ್ಕೂ ಮುನ್ನ ಚಿರತೆಗೆ ಚಿಪ್ ಅಳವಡಿಸಲಿದ್ದೇವೆ. ಅದು ಮತ್ತೆ ಕಾಡು ಬಿಟ್ಟು ಹೊರಗೆ ಬಂದರೆ ಗೊತ್ತಾಗಲಿದೆ’ ಎಂದು ಡಿಸಿಎಫ್ ಇ.ಶಿವಶಂಕರ್ ‘ಪ್ರಜಾವಾಣಿ‘ಗೆ ತಿಳಿಸಿದರು.