ಸಾಗರ: ನಗರಸಭೆಯ ಹೊರಗುತ್ತಿಗೆ ನೌಕರರು ತಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಇಟ್ಟಿರುವ ಬೇಡಿಕೆ ನ್ಯಾಯಯುತವಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಸೇವೆಯನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಮುಷ್ಕರ ಕೈಗೊಂಡಿರುವ ನಗರಸಭೆಯ ಹೊರ ಗುತ್ತಿಗೆ ನೌಕರರನ್ನು ಶನಿವಾರ ಭೇಟಿ ಮಾಡಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.
ಹೊರ ಗುತ್ತಿಗೆ ನೌಕರರು ದೀರ್ಘಕಾಲದಿಂದ ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಈಗಲಾದರೂ ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು. ಆ ಮೂಲಕ ನೌಕರರ ಕಷ್ಟಗಳಿಗೆ ಧ್ವನಿಯಾಗಬೇಕು ಎಂದರು.
‘ಹಲವು ವರ್ಷಗಳಿಂದ ಸೇವೆ ಕಾಯಂಗೊಳಿಸುವಂತೆ ಬೇಡಿಕೆ ಮಂಡಿಸುತ್ತಿರುವ ಹೊರ ಗುತ್ತಿಗೆ ನೌಕರರನ್ನು ಸರ್ಕಾರ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ’ ಎಂದುಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನ. ಶ್ರೀನಿವಾಸ್ ಹೇಳಿದರು.
ನಗರಸಭೆ ಸದಸ್ಯೆ ಮಧು ಮಾಲತಿ, ಮಾಜಿ ಸದಸ್ಯ ಡಿ. ದಿನೇಶ್, ನೌಕರರ ಸಂಘದ ಪ್ರಮುಖರಾದ ಕಾಮರಾಜ್, ತಂಗರಾಜ್, ಎಂ.ನಾಗರಾಜ್, ದೇವರಾಜ್, ವೀರಾ, ಸಿ.ಮೂರ್ತಿ, ಆನಂದ ಬಾಳೆಕೊಪ್ಪ, ಚೆಲುವಿ, ಸುರೇಶ್, ಸುಲೋಚನಾ, ಮುರುಗೇಶ್, ಸತೀಶ್, ರಾಘವೇಂದ್ರ ಇದ್ದರು.