2015ರಲ್ಲಿ ಸಹಕಾರ ಭಾರತಿಯಿಂದ ಸ್ಪರ್ಧಿಸಿದ ಎಲ್ಲ 18 ಸದಸ್ಯರು ಆಯ್ಕೆಯಾಗಿದ್ದು, ಎರಡನೇ ಬಾರಿ ಆಯ್ಕೆಯಾಗಿದ್ದ ವೈ.ಎಸ್.ಸುಬ್ರಹ್ಮಣ್ಯ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. 2020ರಲ್ಲಿ ನಡೆದ ಚುನಾವಣೆಯಲ್ಲಿ ಕೂಡ ಸಹಕಾರ ಭಾರತಿ ಸ್ವೀಪ್ ಮಾಡಿತು. ಆಗ ಸುಬ್ರಹ್ಮಣ್ಯ ಅವರನ್ನು ಎರಡನೇ ಬಾರಿ ಉಪಾಧ್ಯಕ್ಷರನ್ನಾಗಿ ಮಾಡಲಾಯಿತು. ಆದರೆ, ಒಂದೂವರೆ ವರ್ಷದ ಬಳಿಕ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿತಲ್ಲದೆ, ಹೊಸಬರಿಗೆ ಅವಕಾಶ ಕೊಡಲು ನಾಯಕರು ತೀರ್ಮಾನಿಸಿದ್ದರು.