ಹೀಗಾಗಿ, ಜಾತ್ರೆ ಸಂದರ್ಭದಲ್ಲಿ ಯಾರಾದರೂ ಕುರಿ, ಕೋಳಿ ಕಡಿದರೆ ₹ 25 ಸಾವಿರ ದಂಡ ವಿಧಿಸಬೇಕು ಎಂದು ತೀರ್ಮಾನಿಸಲಾಯಿತು. ಈ ತೀರ್ಮಾನಕ್ಕೆ ಬದ್ಧರಾದ ಗ್ರಾಮಸ್ಥರು ಸಸ್ಯಾಹಾರದ ಮೂಲಕವೇ ಕಳೆದ ಮಂಗಳವಾರದಿಂದ ಗುರುವಾರದವರೆಗೆ ಜಾತ್ರೆಯನ್ನು ಪೂರೈಸಿದ್ದಾರೆ. ಎರಡು ದಿನ ಜಾತ್ರೆ ಸಮಿತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.