<p>ಭದ್ರಾವತಿ: ಮನುಕುಲದ ಕಲ್ಯಾಣಕ್ಕಾಗಿ ಯೇಸು ಕ್ರಿಸ್ತರು ಮಾಡಿದ ತ್ಯಾಗವನ್ನು ಸ್ಮರಿಸುವ ಶಿಲುಬೆ ಬೆಟ್ಟದ ಮಹೋತ್ಸವವನ್ನು ಸಮೀಪದ ಮಾವಿನಕೆರೆ ಗ್ರಾಮದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.</p>.<p>ಮಹೋತ್ಸವದ ಅಂಗವಾಗಿ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸುವ ಘಟನೆಗೆ ಸಂಬಂಧಿಸಿದ ‘ಜೀವಂತ ಶಿಲುಬೆ ಹಾದಿ’ ಎಂಬ ರೂಪಕವನ್ನು ಪ್ರಸ್ತುತಪಡಿಸಲಾಯಿತು. ಯೇಸು ಕ್ರಿಸ್ತರು ಪ್ರತಿಪಾದಿಸಿದ ಕ್ಷಮೆ, ಸಹಿಷ್ಣತೆ, ತ್ಯಾಗ ಮೊದಲಾದ ಮೌಲ್ಯಗಳ ಸಂದೇಶ ಸಾರುವ ಫ್ಲೆಕ್ಸ್ಗಳನ್ನು ರಸ್ತೆಯಲ್ಲಿ ಅಳವಡಿಸಲಾಗಿತ್ತು.</p>.<p>ಕಬಳೆ ಧರ್ಮ ಕೇಂದ್ರದ ಧರ್ಮ ಗುರುಗಳಾದ ಫಾದರ್ ರೋಮನ್ ಪಿಂಟೋ ಧಾರ್ಮಿಕ ವಿಧಿಗಳನ್ನು ನಡೆಸಿದರು. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಅಂತ್ಯ ಹಾಗೂ ಜಗತ್ತಿನಾದ್ಯಂತ ಅಂಚಿಗೆ ತಳ್ಳಲ್ಪಟ್ಟವರ ಏಳಿಗೆಗಾಗಿ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಗಿತ್ತು.</p>.<p>ಪಾದಯಾತ್ರೆ ಮೂಲಕ ಗಾಂಧಿನಗರದ ವೆಲಂಕಣಿ ಮಾತೆ ಧರ್ಮಕೇಂದ್ರ ಮತ್ತು ಕಾರೇಹಳ್ಳಿ ಧರ್ಮಕೇಂದ್ರದಿಂದ ಮಾವಿನಕೆರೆ ಶಿಲುಬೆ ಬೆಟ್ಟಕ್ಕೆ ಆಗಮಿಸಿದ್ದ ಭಕ್ತರು ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ರೂಪಕದ ಪಾತ್ರಧಾರಿಗಳನ್ನು ಸನ್ಮಾನಿಸಲಾಯಿತು.</p>.<p>ಮಾವಿನಕೆರೆಯ ಸಂತ ಕಿರಿಯ ಪುಷ್ಪ ತೆರೇಸಾ ಧರ್ಮಕೇಂದ್ರದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.</p>.<p>ವೆಲಂಕಣಿ ಮಾತೆ ಧರ್ಮಕೇಂದ್ರದ ಫಾದರ್ ಸ್ಟೀವನ್ ಡೇಸಾ, ಕಿರಿಯ ಪುಷ್ಪ ಸಂತ ತೆರೇಸಾ ಧರ್ಮಕೇಂದ್ರದ ಫಾದರ್ ಪೌಲ್ ಕ್ರಾಸ್ತಾ, ಅಮಲೋದ್ಭವಿ ಮಾತೆ ಚರ್ಚ್ನ ಫಾದರ್ ಲ್ಯಾನ್ಸಿ ಡಿಸೋಜಾ, ಕಾರೇಹಳ್ಳಿ ಧರ್ಮಕೇಂದ್ರದ ಫಾದರ್ ಸಂತೋಷ್ ಅಲ್ಮೇಡಾ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260323-42-1571308760</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭದ್ರಾವತಿ: ಮನುಕುಲದ ಕಲ್ಯಾಣಕ್ಕಾಗಿ ಯೇಸು ಕ್ರಿಸ್ತರು ಮಾಡಿದ ತ್ಯಾಗವನ್ನು ಸ್ಮರಿಸುವ ಶಿಲುಬೆ ಬೆಟ್ಟದ ಮಹೋತ್ಸವವನ್ನು ಸಮೀಪದ ಮಾವಿನಕೆರೆ ಗ್ರಾಮದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.</p>.<p>ಮಹೋತ್ಸವದ ಅಂಗವಾಗಿ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸುವ ಘಟನೆಗೆ ಸಂಬಂಧಿಸಿದ ‘ಜೀವಂತ ಶಿಲುಬೆ ಹಾದಿ’ ಎಂಬ ರೂಪಕವನ್ನು ಪ್ರಸ್ತುತಪಡಿಸಲಾಯಿತು. ಯೇಸು ಕ್ರಿಸ್ತರು ಪ್ರತಿಪಾದಿಸಿದ ಕ್ಷಮೆ, ಸಹಿಷ್ಣತೆ, ತ್ಯಾಗ ಮೊದಲಾದ ಮೌಲ್ಯಗಳ ಸಂದೇಶ ಸಾರುವ ಫ್ಲೆಕ್ಸ್ಗಳನ್ನು ರಸ್ತೆಯಲ್ಲಿ ಅಳವಡಿಸಲಾಗಿತ್ತು.</p>.<p>ಕಬಳೆ ಧರ್ಮ ಕೇಂದ್ರದ ಧರ್ಮ ಗುರುಗಳಾದ ಫಾದರ್ ರೋಮನ್ ಪಿಂಟೋ ಧಾರ್ಮಿಕ ವಿಧಿಗಳನ್ನು ನಡೆಸಿದರು. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಅಂತ್ಯ ಹಾಗೂ ಜಗತ್ತಿನಾದ್ಯಂತ ಅಂಚಿಗೆ ತಳ್ಳಲ್ಪಟ್ಟವರ ಏಳಿಗೆಗಾಗಿ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಗಿತ್ತು.</p>.<p>ಪಾದಯಾತ್ರೆ ಮೂಲಕ ಗಾಂಧಿನಗರದ ವೆಲಂಕಣಿ ಮಾತೆ ಧರ್ಮಕೇಂದ್ರ ಮತ್ತು ಕಾರೇಹಳ್ಳಿ ಧರ್ಮಕೇಂದ್ರದಿಂದ ಮಾವಿನಕೆರೆ ಶಿಲುಬೆ ಬೆಟ್ಟಕ್ಕೆ ಆಗಮಿಸಿದ್ದ ಭಕ್ತರು ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ರೂಪಕದ ಪಾತ್ರಧಾರಿಗಳನ್ನು ಸನ್ಮಾನಿಸಲಾಯಿತು.</p>.<p>ಮಾವಿನಕೆರೆಯ ಸಂತ ಕಿರಿಯ ಪುಷ್ಪ ತೆರೇಸಾ ಧರ್ಮಕೇಂದ್ರದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.</p>.<p>ವೆಲಂಕಣಿ ಮಾತೆ ಧರ್ಮಕೇಂದ್ರದ ಫಾದರ್ ಸ್ಟೀವನ್ ಡೇಸಾ, ಕಿರಿಯ ಪುಷ್ಪ ಸಂತ ತೆರೇಸಾ ಧರ್ಮಕೇಂದ್ರದ ಫಾದರ್ ಪೌಲ್ ಕ್ರಾಸ್ತಾ, ಅಮಲೋದ್ಭವಿ ಮಾತೆ ಚರ್ಚ್ನ ಫಾದರ್ ಲ್ಯಾನ್ಸಿ ಡಿಸೋಜಾ, ಕಾರೇಹಳ್ಳಿ ಧರ್ಮಕೇಂದ್ರದ ಫಾದರ್ ಸಂತೋಷ್ ಅಲ್ಮೇಡಾ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260323-42-1571308760</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>