ದೇಣಿಗೆ ಸಂಗ್ರಹಿಸಿ ಹೋರಾಟ: ‘ವಿದ್ಯುತ್, ರಸ್ತೆ, ಆಸ್ಪತ್ರೆ ಸೇರಿ ನಾಗರಿಕ ಸೌಲಭ್ಯ ಪಡೆಯಲು 2014ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದೆವು. ನಮ್ಮ ಅಳಲಿಗೆ ಮನ್ನಣೆ ನೀಡಿದ ನ್ಯಾಯಾಲಯ, ಅರಣ್ಯ ಸಂರಕ್ಷಣೆ ಕಾಯ್ದೆ ಉಲ್ಲಂಘನೆಯಾಗದಂತೆ ಸೌಕರ್ಯ ಕಲ್ಪಿಸಲು 2016ರ ಏಪ್ರಿಲ್ 13ರಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅದಕ್ಕೆ ಈಗ ಚಾಲನೆ ದೊರೆತಿದೆ’ ಎಂದು ವಕೀಲರೂ ಆದ ಶೆಟ್ಟಿಹಳ್ಳಿ ನಿವಾಸಿ ದೇವರಾಜ್ ‘ಪ್ರಜಾವಾಣಿ’ಗೆ
ತಿಳಿಸಿದರು.