ಧಾರ್ಮಿಕ ಸಂಸ್ಕಾರದ ಆಚರಣೆಯ ಕೊರತೆಯಿಂದ ತೃಪ್ತಿಕರ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಂಡು, ತಂದೆ ತಾಯಿಗಳನ್ನು ವೃದ್ಧಾಪ್ಯದಲ್ಲಿ ಕೈ ಬಿಡಬಾರದು. ಮಕ್ಕಳು ಕೆಟ್ಟವರಾಗಬಹುದು. ಆದರೆ ಮಕ್ಕಳ ಹಿತ ಬಯಸದ ತಾಯಿ ಇರುವುದಿಲ್ಲ ಎಂದು ಹೇಳಿದರು. ಚನ್ನಗಿರಿ ಹಿರೇಮಠದ ಡಾ. ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಹಾರ್ನಳ್ಳಿ ರಾಮಲಿಂಗೇಶ್ವರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಕಡೇನಂದಿಹಳ್ಳಿ ದುಗ್ಲಿಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಎಚ್. ಷಡಾಕ್ಷರಿ, ಕಾಂಗ್ರೆಸ್ ಮುಖಂಡರಾದ ಡಾ. ಶ್ರೀನಿವಾಸ್ ಕರಿಯಣ್ಣ, ವೈ.ಎಚ್. ನಾಗರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ ತಿಪ್ಪೇಶ್ ರಾವ್, ಗ್ರಾಮದ ಮುಖಂಡರಾದ ತರದ ರವಿಕುಮಾರ್, ಎಚ್.ಬಿ. ರುದ್ರಪ್ಪ, ಹಾಲಪ್ಪ, ಮಂಜಪ್ಪ, ದಾನೇಶ್,
ಎಚ್. ಆರ್. ಬಸವರಾಜಪ್ಪ, ಕುಮಾರ್ ನಾಯ್ಡು ಅವರೂ ಇದ್ದರು.