ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ ಮೂತ್ರಪಿಂಡ ಮಗಳಿಗೆ ಯಶಸ್ವಿ ಜೋಡಣೆ

‘ಪ್ರಜಾವಾಣಿ’ ಜೀವಪರ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ
Last Updated 22 ಮೇ 2022, 2:50 IST
ಅಕ್ಷರ ಗಾತ್ರ

ತುಮರಿ (ಶಿವಮೊಗ್ಗ ಜಿಲ್ಲೆ): ಮಗಳ ಉಳಿವಿಗಾಗಿ ತಮ್ಮ ಒಂದು ಮೂತ್ರಪಿಂಡವನ್ನು ನೀಡುವ ಮೂಲಕತಾಯಿಮಣಿರತ್ನಾ ಸಾರ್ಥಕತೆ ಮೆರೆದಿದ್ದಾರೆ. ‘ಪ್ರಜಾವಾಣಿ’ಯ ವರದಿಗೆ ಸ್ಪಂದಿಸಿ ಜನ ನೀಡಿದ ದೇಣಿಗೆಯಿಂದ ಶಸ್ತ್ರಚಿಕಿತ್ಸೆ ಮಾಡಿಸಲಾಗಿದ್ದು, ಮಗಳು ಆರೋಗ್ಯವಾಗಿರುವುದರಿಂದ ಇದೀಗ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.

ದ್ವೀಪದ ಚನ್ನಗೊಂಡ ಗ್ರಾಮದ ದಾರಿಗದ್ದೆಯವಿಜಯಾಜೈನ್‌ ಅವರಿಗೆ ಮಣಿಪಾಲದ ಕಸ್ತೂರಬಾ ಅಸ್ಪತ್ರೆಯಲ್ಲಿ ಶುಕ್ರವಾರ ಯಶಸ್ವಿಯಾಗಿ ಮೂತ್ರಪಿಂಡವರ್ಗಾವಣೆ ಮಾಡಲಾಗಿದೆ.

ಹಿನ್ನೆಲೆ: ತಿಂಗಳ ಹಿಂದೆಮೂತ್ರಪಿಂಡಬದಲಾವಣೆಗೆ ನೆರವು ಕೋರಿ ವಿಜಯಾ ಜೈನ್ ಅವರು ಮಾಡಿದ ಮನವಿ ಹಿನ್ನೆಲೆಯಲ್ಲಿ ಫೆಬ್ರುವರಿ 21ರಂದು ಚಿಕಿತ್ಸೆಗೆ ನೆರವಾಗುವಂತೆ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ನಂತರದಲ್ಲಿ ಸಿಗಂದೂರು ದೇವಸ್ಥಾನದ ಕಾರ್ಯದರ್ಶಿ ರವಿಕುಮಾರ್ ಅವರು ವಿಜಯಾ ಅವರ ಮನೆಗೆ ಭೇಟಿ ಭೇಟಿ ನೀಡಿ, ಧೈರ್ಯ ಹೇಳಿ ನೆರವು ನೀಡಿದ್ದರು. ಇದರಿಂದ ಅಭಿಯಾನಕ್ಕೆ ಇನ್ನಷ್ಟು ಬಲ ಬಂದಿತ್ತು. ಸಾಮಾಜಿಕ ಜಾಲತಾಣದ ಮೂಲಕ ರಾಜ್ಯದ ಹಲವೆಡೆ ಪ್ರಸಾರಗೊಂಡ ಕಾರಣ ನೂರಾರು ಮಂದಿ ನೆರವು ನೀಡಿದರು. ಅದರ ಪರಿಣಾಮ ಒಂದು ವಾರದಲ್ಲಿ ₹ 16 ಲಕ್ಷ ಸಂಗ್ರಹವಾಗಿದ್ದರಿಂದ ಕುಟುಂಬದವರಿಗೆ ಸಮಾಧಾನವಾಗಿತ್ತು. ‘ಪ್ರಜಾವಾಣಿ’ಯ ಸಾಮಾಜಿಕ ಕಳಕಳಿಗೆ ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಟುಂಬಸ್ಥರು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT