ಹಿನ್ನೆಲೆ: ತಿಂಗಳ ಹಿಂದೆಮೂತ್ರಪಿಂಡಬದಲಾವಣೆಗೆ ನೆರವು ಕೋರಿ ವಿಜಯಾ ಜೈನ್ ಅವರು ಮಾಡಿದ ಮನವಿ ಹಿನ್ನೆಲೆಯಲ್ಲಿ ಫೆಬ್ರುವರಿ 21ರಂದು ಚಿಕಿತ್ಸೆಗೆ ನೆರವಾಗುವಂತೆ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ನಂತರದಲ್ಲಿ ಸಿಗಂದೂರು ದೇವಸ್ಥಾನದ ಕಾರ್ಯದರ್ಶಿ ರವಿಕುಮಾರ್ ಅವರು ವಿಜಯಾ ಅವರ ಮನೆಗೆ ಭೇಟಿ ಭೇಟಿ ನೀಡಿ, ಧೈರ್ಯ ಹೇಳಿ ನೆರವು ನೀಡಿದ್ದರು. ಇದರಿಂದ ಅಭಿಯಾನಕ್ಕೆ ಇನ್ನಷ್ಟು ಬಲ ಬಂದಿತ್ತು. ಸಾಮಾಜಿಕ ಜಾಲತಾಣದ ಮೂಲಕ ರಾಜ್ಯದ ಹಲವೆಡೆ ಪ್ರಸಾರಗೊಂಡ ಕಾರಣ ನೂರಾರು ಮಂದಿ ನೆರವು ನೀಡಿದರು. ಅದರ ಪರಿಣಾಮ ಒಂದು ವಾರದಲ್ಲಿ ₹ 16 ಲಕ್ಷ ಸಂಗ್ರಹವಾಗಿದ್ದರಿಂದ ಕುಟುಂಬದವರಿಗೆ ಸಮಾಧಾನವಾಗಿತ್ತು. ‘ಪ್ರಜಾವಾಣಿ’ಯ ಸಾಮಾಜಿಕ ಕಳಕಳಿಗೆ ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಟುಂಬಸ್ಥರು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.