ಉಪಾಧ್ಯಕ್ಷ ಮಧುರಾಯ್ ಶೇಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿಯ ಈರೇಶಪ್ಪ, ಪ್ರಭು ಮೇಸ್ತ್ರಿ, ನಟರಾಜ, ಜಯಲಕ್ಷ್ಮೀ, ಕಾಂಗ್ರೆಸ್ನ ಪ್ರಸನ್ನಕುಮಾರ ದೊಡ್ಡಮನೆ, ಶ್ರೀರಂಜನಿ, ಆಫ್ರೀನ್ ಬಾನು, ಸುಲ್ತಾನಾ ಬೇಗಂ, ಜೆಡಿಎಸ್ನ ಪ್ರೇಮಾ ಟೋಕಪ್ಪ ಹಾಗೂ ಪಕ್ಷೇತರ ಸದಸ್ಯ ಅನ್ಸರ್ ಅವರು ಅಧ್ಯಕ್ಷರ ವಿರುದ್ಧವಾಗಿ ಕೈಎತ್ತಿದರೆ ಅಧ್ಯಕ್ಷರ ಪರವಾಗಿ ಯಾರೂ ಕೈಎತ್ತಲಿಲ್ಲ. ಇದರಿಂದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡಿತು.