ಅತ್ಯಾಚಾರಿಗಳಿಗೆ ಸರ್ಕಾರ, ಪೊಲೀಸರ ಬಗ್ಗೆ ಭಯವೇ ಇಲ್ಲ. ಮೈಸೂರು ಸೇರಿದಂತೆ ರಾಜ್ಯದ ಎಲ್ಲೆಡೆ ಅತ್ಯಾಚಾರ ಪ್ರಕರಣಗಳು ಮರುಕಳಿಸುತ್ತಿವೆ. ವಿಧಾನ ಪರಿಷತ್ ಸದಸ್ಯರಾಗಿದ್ದ ಸಮಯದಲ್ಲಿ ಕಾನೂನಿಗೆ ತಿದ್ದಿಪಡಿ ತರುವಂತೆ ಆಗ್ರಹಿಸಿದ್ದೆ. ಅಂದಿನ ಗೃಹ ಸಚಿವ ಜಾರ್ಜ್ ಭರವಸೆ ನೀಡಿದ್ದರು. ಇಂದಿಗೂ ಹಳೆಯ ಕಾನೂನು ಜಾರಿಯಲ್ಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.