ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ (ಕೃಷಿ) ಮುಗಿಸಿರುವ ಡಾ.ಜಗದೀಶ, ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಅನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿಯಲ್ಲಿ ಪಿಎಚ್ಡಿ ಪಡೆದಿದ್ದಾರೆ. ಸಸ್ಯ ತಳಿ ಸಂರಕ್ಷಣೆ ಬಗ್ಗೆ ನೆದರ್ಲ್ಯಾಂಡ್ನಲ್ಲಿ ಅಧ್ಯಯನ ನಡೆಸಿದ್ದು, ಸಸ್ಯ ತಳಿ ಸಂಶೋಧಕರಾಗಿ ಸೋಯಾ ಬೀನ್, ತೃಣ ಧಾನ್ಯಗಳ ತಳಿ, ಮೆಣಸಿನಕಾಯಿ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ.