ಇಲ್ಲಿ ಶನಿವಾರ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಕೆಲವು ಸ್ನೇಹಿತರು, ಹಿತೈಷಿಗಳ ಸಲಹೆ, ಸೂಚನೆ ಮಾರ್ಗದರ್ಶನದ ಆಧಾರದಲ್ಲಿ ಮೇಲಿನ ನಿರ್ಧಾರಕ್ಕೆ ಬಂದಿದ್ದೇನೆ. ಭಾನುವಾರ ಹುಬ್ಬಳ್ಳಿಗೆ ತೆರಳಿ ನನ್ನ ವಿಶ್ವಾಸಿಗರ ಜತೆ ಮಾತುಕತೆ ನಡೆಸುತ್ತೇನೆ. ತದನಂತರ ಹೈದರಾಬಾದ್ ಕರ್ನಾಟಕ ಭಾಗದ ಮುಖಂಡರನ್ನು ಭೇಟಿ ಮಾಡಿ ಅವರ ಸಲಹೆ ಪಡೆಯುತ್ತೇನೆ’ ಎಂದು ಹೇಳಿದರು.