ನಂತರ ಸಭೆಯಲ್ಲಿ ಹಾಜರಿದ್ದ ಜನರ ಅಭಿಪ್ರಾಯ ಪಡೆದ ಶಶಿಧರ್, ‘ ರಿಪೇರಿ ಕೆಲಸಗಳನ್ನು ಭಾನುವಾರ ಮಾಡಿಕೊಳ್ಳಿ. ಪದೇ ಪದೇ ಕರೆಂಟ್ ತೆಗೆಯಬೇಡಿ. ನಿಗದಿತ ಸಮಯದಲ್ಲೇ ಎಲ್ಸಿ ಮಾಡಿಕೊಳ್ಳಿ, ವಿದ್ಯುತ್ ಸ್ಥಗಿತ ಮಾಡುವ ಮೊದಲು ಪತ್ರಿಕಾ ಮಾಧ್ಯಮದವರಿಗೆ ತಿಳಿಸಿ. ಇದರಿಂದ ಜನರಿಗೆ ಮಾಹಿತಿ ಲಭಿಸುತ್ತದೆ’ ಎಂದು ಸಲಹೆ ನೀಡಿದರು.