ಅಭ್ಯರ್ಥಿಗಳಾದ ಹೊನ್ನಾನಿ ದೇವರಾಜ್, ಹೇಮರಾಜ್, ಮಯದ್ದಿ, ಪ್ರಹ್ಲಾದ್, ಮಂಜುನಾಥ್, ಇಂದಿರಮ್ಮ, ನೇತ್ರಾವತಿ ಮತ್ತು ಅಮಿತಾ ಅವರು ಕಲಾನಾಥೇಶ್ವರ ದೇವರ ಮುಂದೆ ಪ್ರಮಾಣ ಮಾಡಿದರು. ಅಭ್ಯರ್ಥಿಗಳ ಪರ ಸ್ನೇಹಿತರು, ಅಭಿಮಾನಿಗಳು, ಬಂಧುಗಳೂ ಪ್ರಚಾರದ ನೆಪದಲ್ಲಿ ಹಣ ಮತ್ತು ಹೆಂಡ ಹಂಚುವ ಕಾಯಕದಲ್ಲಿ ತೊಡಗುವುದಿಲ್ಲ ಎಂದೂ ಘೋಷಿಸಿದರು.