‘ಇಂದು ವಿಶ್ವವಿದ್ಯಾಲಯಗಳು ಜಾತಿ ಕೂಪಗಳಾಗುತ್ತಿವೆ. ಆದರೆ ತೀ.ನಂ. ಅವರಲ್ಲಿ ಎಂದಿಗೂ ಜಾತೀಯತೆ ಸುಳಿಯಲಿಲ್ಲ. ಎಲ್ಲರನ್ನೂ ಜಾತ್ಯತೀತ ಮನೋಭಾವದಿಂದ ಕಾಣುತ್ತಿದ್ದರು. ಇಂದು ನಾಡಿನ ವಿವಿಧೆಡೆ ತೀ.ನಂ. ಶ್ರದ್ಧಾಂಜಲಿ ಸಭೆ ಆಯೋಜಿಸಿ ಕನ್ನಡ ಸಾಹಿತ್ಯ ಪರಂಪರೆಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ. ಆದರೆ, ಕುವೆಂಪು ವಿಶ್ವವಿದ್ಯಾಲಯ, ಇಲ್ಲವೇ ಕನ್ನಡ ಭಾರತಿ ವಿಭಾಗದಲ್ಲಿ ಶ್ರದ್ಧಾಂಜಲಿಸಭೆ ಆಯೋಜಿಸದಿರುವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.