ಅಡಿಕೆ ವಹಿವಾಟನ್ನೇ ಪ್ರಮುಖವಾಗಿ ನಡೆಸುತ್ತಿರುವ ಸಹಕಾರ ಸಂಸ್ಥೆಗಳ ಅಧಿಕಾರ ಹಿಡಿದಿರುವ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಸಂಸ್ಥೆಗೆ ಕಾಯ್ದೆ ತಿದ್ದುಪಡಿ ನುಂಗಲಾರದ ಬಿಸಿ ತುಪ್ಪವಾಗಿದೆ. ಬೆಳೆಗಾರರ, ವರ್ತಕರ, ದಲಾಲರ ವಿರೋಧವನ್ನು ಗ್ರಹಿಸಿರುವ ಬಿಜೆಪಿ, ಸಂಘ ಪರಿವಾರದ ಮುಖಂಡರು ತಿದ್ದುಪಡಿ ಪುನರ್ ಪರಿಶೀಲನೆಗೆ ಸರ್ಕಾರದ ಒತ್ತಡ ಹೇರಲು ಆರಂಭಿಸಿದ್ದಾರೆ.