ಬೆಂಗಳೂರಿನ ವರಪ್ಪನ ಅಗ್ರಹಾರದಲ್ಲಿರುವ ರೌಡಿ ಬಚ್ಚನ್ ತನ್ನ ಸಹಚರರ ಮೂಲಕ ಶಿವಮೊಗ್ಗದ ವ್ಯಾಪಾರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದನು. ಹಣಕೊಡದೇ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದ ಕಾರಣ ಕುಪಿತಗೊಂಡ ಆತನ ತಂಡ ಅವರ ಮೇಲೆ ಹಲ್ಲೆ ನಡೆಸಿತ್ತು. ಈ ಗುಂಪಿನ ನೇತೃತ್ವ ವಹಿಸಿದ್ದ ದೀಪುವನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ತುಂಗಾನಗರ ಇನ್ಸ್ಪೆಕ್ಟರ್ ದೀಪಕ್ ರಿವಾಲ್ವಾರ್ನಿಂದ ಕಾಲಿಗೆ ಗುಂಡು ಹಾರಿಸಿದ್ದಾರೆ.