‘ರಾಜಕೀಯ ಪಕ್ಷಗಳು ರೈತರ ಹೆಸರಿನಲ್ಲಿ ವಿಭಾಗಗಳನ್ನು ಮಾಡಿಕೊಂಡಿವೆ. ಹಾಗೆ ಮಾಡಿಕೊಂಡರೂ ಅವರ ಪಕ್ಷದ ಶಾಲುಗಳನ್ನು ಬಳಸಬೇಕು. ರೈತ ಸಂಘಟನೆಗಳು ರಾಜಕೀಯದಿಂದ ದೂರ ಉಳಿದು ಹೋರಾಟ ನಡೆಸಬೇಕು. ಹಿಂದೆ ರಾಜಕೀಯ ಹಿತಾಸಕ್ತಿಯತ್ತ ಚಿತ್ತ ಹರಿಸಿದ ಕಾರಣ ಸಂಘಟನೆ ಛಿದ್ರವಾಗಿತ್ತು. ರೈತ ಮುಖಂಡರು ಸ್ವಾರ್ಥ, ಅಧಿಕಾರ ದಾಹ ಇಲ್ಲದೇ ಸಂಘಟನೆ ಬಲಪಡಿಸಬೇಕು’ ಎಂದು ಕಿವಿಮಾತು ಹೇಳಿದರು.