‘ಹಿಂದೂ ಪದದಲ್ಲಿ ಅಶ್ಲೀಲ ಇದೆ. ಇದನ್ನು ಬಲವಂತದಿಂದ ಹೇರಬೇಡಿ’ ಎಂದು ಸತೀಶ್ ಜಾರಕಿಹೊಳಿ ಹೇಳಿರುವುದು ಖಂಡನೀಯ. ನಾವೆಂದಿಗೂ ಹಿಂದೂ ಪರವಿರುವಂತೆ ಯಾರ ಮೇಲೂ ಬಲವಂತ ಮಾಡುತ್ತಿಲ್ಲ. ‘ಹಿಂದೂ’ ಎಂಬ ಪದವನ್ನು ಕುವೆಂಪು ಅವರ ಸಾಹಿತ್ಯದಲ್ಲಿ, ಬೃಹಸ್ಪತಿಗಳ ಗ್ರಂಥ ಸೇರಿ ಅನೇಕ ಕಾವ್ಯ, ಬರಹ, ಸಾಹಿತ್ಯಗಳಲ್ಲಿಯೂ ಉಲ್ಲೇಖಿಸಲಾಗಿದೆ. ‘ಹಿಂದೂ’ ಪದದ ಬಗ್ಗೆ ಚರ್ಚೆಯಾಗಲಿ ಎಂದು ಜಾರಕಿಹೊಳಿ ಹೇಳಿರುವುದು ಅವರ ಅಪ್ರಬುದ್ಧತೆಗೆ ಸಾಕ್ಷಿಯಾಗಿದೆ’ ಎಂದು ಟೀಕಿಸಿದರು.