ಹೊಳೆಹೊನ್ನೂರು: ಹಸುಗಳನ್ನು ಅಕ್ರಮವಾಗಿ ಕಸಾಯಿ ಖಾನೆಗಳಿಗೆ ಸಾಗಣೆ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದ ಹೊಳೆಹೊನ್ನೂರು ಪೊಲೀಸರು ಮೂವರು ಹಸುಗಳನ್ನು ರಕ್ಷಿಸಿ ಆರೋಪಿ ಸಿದ್ದಿಕ್ ಖಾನ್ನನ್ನು (28) ಬಂಧಿಸಿದ್ದಾರೆ.
ಹೊಳೆಹೊನ್ನೂರಿನ ರಸ್ತೆಯಲ್ಲಿ ಬೊಲೆರೊ ತಡೆದು ಪರೀಕ್ಷಿಸಿದಾಗ ಪ್ರಕರಣ ಪತ್ತೆಯಾಗಿದೆ. ಸಿದ್ದಿಕ್ ಖಾನ್ ಭದ್ರಾವತಿಯ ದೊಡಮಘಟ್ಟ ಮೂಲದವನು. ಹೊನ್ನಾಳಿ ಕಡೆಯಿಂದ ಹೊಳೆಹೊನ್ನೂರು ಮಾರ್ಗವಾಗಿ ದನಗಳನ್ನು ಸಾಗಣೆ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಹೊಳೆಹೊನ್ನೂರು ಪೊಲೀಸ್ ಠಾಣೆ ಸಿಪಿಐ ಲಕ್ಷ್ಮೀಪತಿ ನೇತೃತ್ವದ ತಂಡ ದಾಳಿ ನಡೆಸಿದೆ. ವಶಕ್ಕೆ ಪಡೆದ ಹಸುಗಳನ್ನು ಗೋಶಾಲೆಗೆ ಒಪ್ಪಿಸಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.