ಕೇಂದ್ರ ಸರ್ಕಾರ ಉಂಬ್ಲೆಬೈಲು, ಕಾಕನಹೊಸೂಡಿ ಹಾಗೂ ಲಿಂಗಾಪುರ ಗ್ರಾಮದ ಜನವಸತಿ ಮತ್ತು ಕೃಷಿ ಭೂಮಿ ಒಳಗೊಂಡ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶ,ಪರಿಸರ ಸೂಕ್ಷ್ಮವಲಯಎಂದು ಅಧಿಸೂಚನೆ ಹೊರಡಿಸಲಾಗಿದೆ.ಇಂತಹ ನಿರ್ಧಾರಅವೈಜ್ಙಾನಿಕ.ಕೃಷಿ ಅವಲಂಬಿತರ ಬದುಕು, ಅಭಿವೃದ್ದಿ, ಸಾಂಸ್ಕೃತಿಕ ಹಕ್ಕುಗಳುಮೊಟಕುಗೊಳ್ಳುತ್ತವೆ.ಗ್ರಾಮಗಳಲ್ಲಿ ಸಭೆಗಳನ್ನು ನಡೆಸದೇ, ಅಭಿಪ್ರಾಯ ಸಂಗ್ರಹಿಸಿದೆ ಅವಾಸ್ತವಿಕವಾಗಿ ಅಧಿಸೂಚನೆ ಹೊರಡಿಸಿರುವುದು ಜನವಿರೋಧಿ ಧೋರಣೆ ಎಂದು ಆರೋಪಿಸಿದರು.