ಮುತ್ತೂರು ಕೊಲ್ಲನಾಯ್ಕ ತಾವು ಸಾಕಿದ್ದ ಮೂರು ಕುರಿಗಳು ಅನಾರೋಗ್ಯ ಪೀಡಿತವಾದ ಕಾರಣ ಚಿಕಿತ್ಸೆಗಾಗಿ ದೂರವಾಣಿ ಮೂಲಕ ಪಶು ಆಸ್ಪತ್ರೆ ಸಂಪರ್ಕಿಸಿದರು. ಅಷ್ಟರಲ್ಲೇ ಹೊಟ್ಟೆ ಉಬ್ಬರಿಸಿ ಒಂದು ಕುರಿ ಮೃತಪಟ್ಟಿತು. ಮರಣೋತ್ತರ ಪರೀಕ್ಷೆಗಾಗಿ ಮಧ್ಯಾಹ್ನ 3.30ಕ್ಕೆ ಸತ್ತ ಕುರಿಯನ್ನು ರೈತ ಆಸ್ಪತ್ರೆಗೆ ತಂದರು. ಆದರೆ ಅಷ್ಟರೊಳಗೆ ಪಶುವೈದ್ಯ ಸಿಬ್ಬಂದಿ ಆಸ್ಪತ್ರೆಗೆ ಬೀಗ ಹಾಕಿ ಹೋಗಿದ್ದರು.