ಕೋವಿಡ್ ಪೀಡಿತ ಎಲ್ಲಾ ಜನ ಸಾಮಾನ್ಯರಿಗೂ ಉಚಿತ ಚಿಕಿತ್ಸೆ ಸಿಗಬೇಕು. ಎಲ್ಲ ವಯೋಮಾನದವರಿಗೂ ಲಸಿಕೆ ನೀಡಬೇಕು. ಕೊರೊನಾ ಪರೀಕ್ಷೆ ನಡೆದ 24 ತಾಸಿನ ಒಳಗೆ ಫಲಿತಾಂಶ ಕೊಡಬೇಕು. ಬಿಪಿಎಲ್ ಕುಟುಂಬಗಳಿಗೆ ಅಕ್ಕಿಯ ಜತೆ ಬೇಳೆ, ಎಣ್ಣೆ ಒಳಗೊಂಡ ದಿನಸಿ ವಿತರಿಸಬೇಕು. ಪ್ರತಿ ತಿಂಗಳು ₹ 5 ಸಾವಿರ ಆರ್ಥಿಕ ನೆರವು ನೀಡಬೇಕು. ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡಬೇಕು. ಹೂವು, ಹಣ್ಣು, ತರಕಾರಿ ಬೆಳೆಗಾರರಿಗೆ ಎಕರೆಗೆ ₹ 25 ಸಾವಿರ ನೀಡಬೇಕು. ತಕ್ಷಣ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಗ್ರಾಮೀಣ ಭಾಗದಲ್ಲೂ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನು ತೆರೆಯಬೇಕು. ಹೆಚ್ಚುತ್ತಿರುವ ಸೋಂಕು ತಡೆಯಬೇಕು ಎಂದು ಒತ್ತಾಯಿಸಿದರು.