ಲಡ್ಡು ನೀಡಿ ಸ್ವಾಗತ: ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಖುದ್ದು ಸ್ವಾಗತಿಸಿದ್ದು ವಿಶೇಷವಾಗಿತ್ತು. ಹೂಗುಚ್ಛ ನೀಡಿ ಲಡ್ಡು ವಿತರಿಸಿ ಸಂಭ್ರಮದ ಮೂಲಕ ಮಕ್ಕಳನ್ನು ಶಾಲೆಗೆ ಬರಮಾಡಿ ಕೊಳ್ಳಲಾಯಿತು. ಪೋಷಕರಾದ ಉಮೇಶ ಗಾಣದಗದ್ದೆ, ಮಂಜುನಾಥ ಹೊಂಗೆಬೈಲು, ಉಮೇಶ್ ಮಳಲಿ, ಸುರೇಶ ಹಾಲಗದ್ದೆ, ದಿವ್ಯಾ ಉಮೇಶ್, ಪವಿತ್ರಾ, ಅಂಬಿಕಾ, ಪ್ರಭಾ ಜ್ಯೋತಿ, ವಸಂತಿ ಪಾಲ್ಗೊಂಡಿದ್ದರು.