ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯಅವರು ಭಾಷಣ ಮಾಡುತ್ತಿರುವ ಚಿತ್ರ ಹಾಕಿ ‘ವಿಶ್ವಕ್ಕೆ ಗೊತ್ತಿರುವ ಕಟು ಸತ್ಯ ಏನು ಅಂದ್ರೆ ಕೊರೊನಾ ಹರಡುವುದು ಕೈಯಿಂದ ಹೊರತು ಕಮಲದ ಹೂವಿನಿಂದ ಅಲ್ಲ’ ಎಂದು ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ್ದಾರೆ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಇಂತಹ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು. ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.