<p><strong>ಶಿವಮೊಗ್ಗ:</strong> ಕುವೆಂಪು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ, ಸಂಶೋಧನಾ ವಿಭಾಗ ಮತ್ತು ಶಾಂತವೇರಿ ಗೋಪಾಲಗೌಡ ಅಧ್ಯಯನ ಪೀಠದ ಸಹಯೋಗದೊಂದಿಗೆ ಪ್ರೊ.ಎ ಷಣ್ಮುಖ ಅವರ ‘ಪುನರಾವಲೋಕನ’ ಪುಸ್ತಕ ಬಿಡುಗಡೆ ಮಾಡಲಾಯಿತು.</p>.<p>ಇದೇ ವೇಳೆ ‘ಆಧುನಿಕ ಭಾರತೀಯ ರಾಜಕೀಯ ಚಿಂತನೆಯ ಪುನರಾವಲೋಕನ: ವಸಾಹತು ಚಿಂತನಾ ಚೌಕಟ್ಟು ಮತ್ತು ಸಮಕಾಲೀನ ಸವಾಲುಗಳು’ ವಿಷಯದ ಮೇಲೆ ವಿಚಾರ ಸಂಕಿರಣ ನಡೆಯಿತು.</p>.<p>ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ‘ಪುನರಾವಲೋಕನ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.</p>.<p>‘ಪ್ರೊ.ಎ ಷಣ್ಮುಖ ಅವರ ಪುಸ್ತಕವು ಗಂಭೀರ ಚಿಂತನೆಗೆ, ವಿಮರ್ಶೆಗೂ ಅವಕಾಶ ಮಾಡಿಕೊಡುತ್ತದೆ. ಎಲ್ಲಾ ಬಗೆಯ ಚಿಂತಕರ ಚಿಂತನೆಗಳನ್ನೂ ಯಾವುದೇ ಪೂರ್ವಗ್ರಹಗಳಿಲ್ಲದೆ ಗೌರವಪೂರ್ವಕವಾಗಿಯೇ ವಿಮರ್ಶೆಗೆ ಒಳಪಡಿಸಬೇಕು. ಈ ಕೃತಿಯ ಎಲ್ಲ ವಾದಗಳನ್ನೂ ಒಪ್ಪದೇ ಇದ್ದರೂ ಅವನ್ನು ವಸ್ತುನಿಷ್ಠವಾದ ನೆಲೆಯಲ್ಲಿ ವೈಜ್ಞಾನಿಕ ಚರ್ಚೆಗೆ ಒಳಪಡಿಸಬೇಕು’ ಎಂದರು.</p>.<p>ಪುಸ್ತಕದ ಕುರಿತು ಮಾತನಾಡಿದ ಎಫ್.ಎಸ್.ಐ.ಸಿ ನಿರ್ದೇಶಕಿ ಪ್ರೊ.ಎಂ.ಎಸ್. ಚೈತ್ರಾ, ‘ಬೌದ್ಧಿಕ ವಲಯದಲ್ಲಿರುವ ಸಾಂಪ್ರದಾಯಿಕ ಪ್ರಶ್ನೆ ಯಾವುದು, ವೈಜ್ಞಾನಿಕ ಪ್ರಶ್ನೆ ಯಾವುದು ಎಂಬುದನ್ನು ಗುರುತಿಸಲು ಈ ಪುಸ್ತಕ ಮಾರ್ಗಸೂಚಿಯಾಗಿದೆ’ ಎಂದರು.</p>.<p>‘ರಾಜಕೀಯ ವ್ಯವಸ್ಥೆಗೂ ಮತ್ತು ಭಾರತೀಯರ ಜೀವನಾನುಭವಕ್ಕೂ ಕಂದಕವಿದೆ. ಅದನ್ನು ಗುರುತಿಸಲು ನಮ್ಮ ಹಿರಿಯರು ಎದುರಿಸಿದ ಸವಾಲುಗಳೇನು? ಅದಕ್ಕಾಗಿ ಅವರು ಕಂಡುಕೊಂಡ ಪರಿಹಾರ ಕ್ರಮಗಳೇನು ಎಂಬುದನ್ನು ಗುರುತಿಸಬೇಕಾಗುತ್ತದೆ. ಹಾಗಾಗಿ ಈ ಪುಸ್ತಕವು ನಿರ್ಣಾಯಕವಾಗುತ್ತದೆ’ ಎಂದು ಹೇಳಿದರು.</p>.<p>ಶಾಂತವೇರಿ ಗೋಪಾಲಗೌಡ ಅಧ್ಯಯನ ಪೀಠದ ಅಧ್ಯಕ್ಷರೂ ಆದ ಲೇಖಕ ಪ್ರೊ.ಎ.ಷಣ್ಮುಖ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುವೆಂಪು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ತಿಮ್ಮರಾಯಪ್ಪ, ಹಣಕಾಸು ಅಧಿಕಾರಿ ಪ್ರೊ.ಎಚ್.ಎನ್.ರಮೇಶ್, ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಯು.ವೆಂಕಟೇಶ, ವಿನುತಾ ಎಸ್. ಪಾಟೀಲ್, ವಿ.ಎನ್. ಯೋಗರಾಜ, ಯುವರಾಜ್ ಎಂ.ಹಿತ್ಲರ್ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಕುವೆಂಪು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ, ಸಂಶೋಧನಾ ವಿಭಾಗ ಮತ್ತು ಶಾಂತವೇರಿ ಗೋಪಾಲಗೌಡ ಅಧ್ಯಯನ ಪೀಠದ ಸಹಯೋಗದೊಂದಿಗೆ ಪ್ರೊ.ಎ ಷಣ್ಮುಖ ಅವರ ‘ಪುನರಾವಲೋಕನ’ ಪುಸ್ತಕ ಬಿಡುಗಡೆ ಮಾಡಲಾಯಿತು.</p>.<p>ಇದೇ ವೇಳೆ ‘ಆಧುನಿಕ ಭಾರತೀಯ ರಾಜಕೀಯ ಚಿಂತನೆಯ ಪುನರಾವಲೋಕನ: ವಸಾಹತು ಚಿಂತನಾ ಚೌಕಟ್ಟು ಮತ್ತು ಸಮಕಾಲೀನ ಸವಾಲುಗಳು’ ವಿಷಯದ ಮೇಲೆ ವಿಚಾರ ಸಂಕಿರಣ ನಡೆಯಿತು.</p>.<p>ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ‘ಪುನರಾವಲೋಕನ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.</p>.<p>‘ಪ್ರೊ.ಎ ಷಣ್ಮುಖ ಅವರ ಪುಸ್ತಕವು ಗಂಭೀರ ಚಿಂತನೆಗೆ, ವಿಮರ್ಶೆಗೂ ಅವಕಾಶ ಮಾಡಿಕೊಡುತ್ತದೆ. ಎಲ್ಲಾ ಬಗೆಯ ಚಿಂತಕರ ಚಿಂತನೆಗಳನ್ನೂ ಯಾವುದೇ ಪೂರ್ವಗ್ರಹಗಳಿಲ್ಲದೆ ಗೌರವಪೂರ್ವಕವಾಗಿಯೇ ವಿಮರ್ಶೆಗೆ ಒಳಪಡಿಸಬೇಕು. ಈ ಕೃತಿಯ ಎಲ್ಲ ವಾದಗಳನ್ನೂ ಒಪ್ಪದೇ ಇದ್ದರೂ ಅವನ್ನು ವಸ್ತುನಿಷ್ಠವಾದ ನೆಲೆಯಲ್ಲಿ ವೈಜ್ಞಾನಿಕ ಚರ್ಚೆಗೆ ಒಳಪಡಿಸಬೇಕು’ ಎಂದರು.</p>.<p>ಪುಸ್ತಕದ ಕುರಿತು ಮಾತನಾಡಿದ ಎಫ್.ಎಸ್.ಐ.ಸಿ ನಿರ್ದೇಶಕಿ ಪ್ರೊ.ಎಂ.ಎಸ್. ಚೈತ್ರಾ, ‘ಬೌದ್ಧಿಕ ವಲಯದಲ್ಲಿರುವ ಸಾಂಪ್ರದಾಯಿಕ ಪ್ರಶ್ನೆ ಯಾವುದು, ವೈಜ್ಞಾನಿಕ ಪ್ರಶ್ನೆ ಯಾವುದು ಎಂಬುದನ್ನು ಗುರುತಿಸಲು ಈ ಪುಸ್ತಕ ಮಾರ್ಗಸೂಚಿಯಾಗಿದೆ’ ಎಂದರು.</p>.<p>‘ರಾಜಕೀಯ ವ್ಯವಸ್ಥೆಗೂ ಮತ್ತು ಭಾರತೀಯರ ಜೀವನಾನುಭವಕ್ಕೂ ಕಂದಕವಿದೆ. ಅದನ್ನು ಗುರುತಿಸಲು ನಮ್ಮ ಹಿರಿಯರು ಎದುರಿಸಿದ ಸವಾಲುಗಳೇನು? ಅದಕ್ಕಾಗಿ ಅವರು ಕಂಡುಕೊಂಡ ಪರಿಹಾರ ಕ್ರಮಗಳೇನು ಎಂಬುದನ್ನು ಗುರುತಿಸಬೇಕಾಗುತ್ತದೆ. ಹಾಗಾಗಿ ಈ ಪುಸ್ತಕವು ನಿರ್ಣಾಯಕವಾಗುತ್ತದೆ’ ಎಂದು ಹೇಳಿದರು.</p>.<p>ಶಾಂತವೇರಿ ಗೋಪಾಲಗೌಡ ಅಧ್ಯಯನ ಪೀಠದ ಅಧ್ಯಕ್ಷರೂ ಆದ ಲೇಖಕ ಪ್ರೊ.ಎ.ಷಣ್ಮುಖ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುವೆಂಪು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ತಿಮ್ಮರಾಯಪ್ಪ, ಹಣಕಾಸು ಅಧಿಕಾರಿ ಪ್ರೊ.ಎಚ್.ಎನ್.ರಮೇಶ್, ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಯು.ವೆಂಕಟೇಶ, ವಿನುತಾ ಎಸ್. ಪಾಟೀಲ್, ವಿ.ಎನ್. ಯೋಗರಾಜ, ಯುವರಾಜ್ ಎಂ.ಹಿತ್ಲರ್ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>