ಆನವಟ್ಟಿ: ಪಟ್ಟಣದಲ್ಲಿ ಶನಿವಾರ ಸಂಜೆ ಸುರಿದ ಮಳೆಗೆ ಕೆನರಾ ಬ್ಯಾಂಕ್ ಕ್ರಾಸ್ನಿಂದ ಪೊಲೀಸ್ ಠಾಣೆವರೆಗೂ ನೀರು ರಸ್ತೆಯಲ್ಲಿ ಹರಿಯಿತು.
ಇದರಿಂದ ಠಾಣೆ ಎದುರಿನ ಕ್ವಾರ್ಟರ್ಸ್ಗಳಲ್ಲಿ ಭಾರಿ ಪ್ರಮಾಣದ ನೀರು ನುಗ್ಗಿತು.
ಸೊರಬ ರಸ್ತೆಯ ಮೊದಲನೇ ಕೆನರಾ ಬ್ಯಾಂಕ್ ಪಕ್ಕದ ತಿರುವಿನಲ್ಲಿ ಪೈಪ್ಲೈನ್ ಕಾಮಗಾರಿ ಅಪೂರ್ಣಗೊಂಡಿದ್ದು, ರಸ್ತೆಯಲ್ಲಿ ಗುಂಡಿ ಬಿದ್ದಿದೆ.
ಮಳೆ ಬಂದಾಗ ಗುಂಡಿಯಲ್ಲಿ ನೀರು ತುಂಬುವ ಕಾರಣ ರಸ್ತೆ ಕಾಣದೇ ಅಪಘಾತಗಳು ಸಂಭವಿಸುತ್ತಿವೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಚರಂಡಿ ವ್ಯವಸ್ಥೆ ಮಾಡಬೇಕು ಎಂದುಮಂಡಕ್ಕಿ ಹೋಟೆಲ್ ಮಾಲೀಕ ಲಿಂಗರಾಜ್ ಗೌಳಿ ಒತ್ತಾಯಿಸಿದ್ದಾರೆ.