‘ಆನವಟ್ಟಿ ಸುತ್ತಲ ಗ್ರಾಮಗಳಿಗೂ ಅನುಕೂಲವಾಗಲಿ ಎಂದು ದಾನಿಗಳು ಪಶು ಆಸ್ಪತ್ರೆಗೆಂದೇ ಭೂಮಿ ದಾನ ಮಾಡಿದ್ದಾರೆ. ಕೊರತೆ ಇರುವ ಪಶು ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ನೇಮಿಸಲಿ. ಅದನ್ನು ಬಿಟ್ಟು ಇಲ್ಲಸಲ್ಲದ ಕಾರಣ ಹೇಳಿ ಪಶು ಆಸ್ಪತ್ರೆ ಸ್ಥಳಾಂತರ ಮಾಡಿದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ರೈತರಾದ ರೇವಣಪ್ಪ, ದೇವರಾಜ ಜೋಗಳ್ಳೇರ್, ಚನ್ನಪ್ಪ ಗೌಡ, ಚಂದ್ರು ಗೌಡ, ಬೋಜಪ್ಪ ಗೌಡ, ಯುವರಾಜ, ಶಿವಣ್ಣ ಹುಣಸವಳ್ಳಿ ಸೇರಿ ಹಲವು ರೈತರು ಎಚ್ಚರಿಸಿದ್ದಾರೆ.