ರಸ್ತೆ ಅಭಿವೃದ್ಧಿಯಿಂದ ಮಲೆನಾಡ ತವರು ತೀರ್ಥಹಳ್ಳಿಯ ಪ್ರಗತಿಗೆ ವೇಗ ಸಿಕ್ಕಂತಾಗಿದೆ.ತೀರ್ಥಹಳ್ಳಿಯನ್ನು ಹಾದು ಹೋಗುವ ರಸ್ತೆ ಮಾರ್ಗವನ್ನು 20 ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಮಾರ್ಗವನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಪಟ್ಟಣದ ಕೊಪ್ಪ ವೃತ್ತದಿಂದ ಮೇಲಿನಕುರುವಳ್ಳಿ, ದೇವಂಗಿ, ಕೊಪ್ಪ, ಹರಿಹರಪುರ, ಶೃಂಗೇರಿ ಮಾರ್ಗದ ರಸ್ತೆ ವಿಸ್ತರಣೆ ಕಾಮಗಾರಿಗೆ ಈಗ ₹ 96 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿ ಆರಂಭಿಸಲಾಗಿದೆ.